ನ್ಯೂಸ್ ನಾಟೌಟ್ : ಮಂಗಳೂರು ವಿಶ್ವವಿದ್ಯಾನಿಲಯ, ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ನಲವತ್ತೇಳನೇ ವರ್ಷದ ವಾರ್ಷಿಕ ವಿಶೇಷ ಶಿಬಿರವು ಫೆ. 22ನೇ ಶನಿವಾರದಿಂದ ಫೆ. 28 ಶುಕ್ರವಾರದವರೆಗೆ ಮಂಡೆಕೋಲು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕನ್ಯಾನದಲ್ಲಿ ನಡೆಯಲಿದೆ. ಈ ಶಿಬಿರವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ ಡಾ ಕೆ ವಿ ಚಿದಾನಂದ ಇವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ| ರುದ್ರಕುಮಾರ್ ಎಂ. ಎಂ., ಪ್ರಾಂಶುಪಾಲರು, ಎನ್.ಎಂ.ಸಿ. ಸುಳ್ಯಚಂದ್ರಶೇಖರ ಪೇರಾಲ್, ಆಡಳಿತಾಧಿಕಾರಿ ಎನ್.ಎಂ.ಸಿ ಸುಳ್ಯ,ಕುಶಲ ಉದ್ದಂತಡ್ಕ, ಅಧ್ಯಕ್ಷರು, ಗ್ರಾಮ ಪಂಚಾಯತ್, ಮಂಡೆಕೋಲು,ಪ್ರತಿಮಾ ಹೆಬ್ಬಾರ್, ಉಪಾಧ್ಯಕ್ಷರು, ಗ್ರಾಮ ಪಂಚಾಯತ್, ಮಂಡೆಕೋಲು.ಯೋಗೀಶ್, ಕೆ. ಎನ್. ಅಧ್ಯಕ್ಷರು, SDMC ಸ.ಕಿ.ಪ್ರಾ.ಶಾಲೆ, ಕನ್ಯಾನ.ಶೀತಲ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುಳ್ಯ.ಡಾ। ಅನಂತ ಪದ್ಮನಾಭ ಭಟ್ ಎರ್ಕಲ್ಪಾಡಿ, ಗೌರವಾಧ್ಯಕ್ಷರು, SDMC ಸ.ಕಿ.ಪ್ರಾ.ಶಾಲೆ, ಕನ್ಯಾನ ಸುರೇಶ್ ಕಣೆಮರಡ್ಕ, ಅಧ್ಯಕ್ಷರು, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಮಂಡೆಕೋಲು.ಸದಾನಂದ ಮಾವಂಜಿ, ಅಧ್ಯಕ್ಷರು, ಹಾಲು ಉತ್ಪಾದಕರ ಸಂಘ, ಮಂಡೆಕೋಲು. ಪ್ರಮೀಳಾ, ನಿವೃತ್ತ ಅಧ್ಯಾಪಕರು, ಕನ್ಯಾನ.ಕೇಶವ ಮೂರ್ತಿ ಹೆಬ್ಬಾರ್, ಅಧ್ಯಕ್ಷರು, NSS ಕ್ಯಾಂಪ್ ಸ್ವಾಗತ ಸಮಿತಿ, ಕನ್ಯಾನ.ರಮೇಶ್ ಸಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮಂಡೆಕೋಲು ಸುನಿತಾ ಎಂ. ಎನ್. ಮುಖ್ಯಶಿಕ್ಷಕರು, ಸ.ಕಿ.ಪ್ರಾ.ಶಾಲೆ ಕನ್ಯಾನ,ಧನಲಕ್ಷ್ಮಿ, ಸಮೂಹ ಸಂಪನ್ಮೂಲ ವ್ಯಕ್ತಿ ಹಾಗೂ ಶಿಕ್ಷಣ ಸಂಯೋಜಕರು, ಸುಳ್ಯ ಸಂಜೀವ ಕುದ್ದಾಜೆ, ಎನ್.ಎಸ್.ಎಸ್. ಸಲಹಾ ಸಮಿತಿ, ಎನ್ನೆಂಸಿ ಸುಳ್ಯ ಭಾಗವಹಿಸಲಿದ್ದಾರೆ . ಶಿಬಿರಾಧಿಕಾರಿಗಳಾಗಿ ಚಿತ್ರಲೇಖ ಕೆ ಎಸ್ ಹಾಗೂ ಹರಿಪ್ರಸಾದ್ ಅತ್ಯಾಡಿ ಕಾರ್ಯ ನಿರ್ವಹಿಸಲಿದ್ದಾರೆ. 7 ದಿನಗಳ ಕಾಲ ನಡೆಯಲಿರುವ ಈ ವಿಶೇಷ ಶಿಬಿರದಲ್ಲಿ ಶ್ರಮದಾನ ಸೇರಿದಂತೆ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.