ಸುಳ್ಯ

ಸುಳ್ಯ: ಅಸೌಖ್ಯದಿಂದ ಕೊನೆಯುಸಿರೆಳೆದ 1 ನೇ ತರಗತಿಯ ಬಾಲಕ..!, ಬಾಳಿ ಬದುಕ ಬದುಕಬೇಕಾಗಿದ್ದ ವಿದ್ಯಾರ್ಥಿಯ ಬದುಕನ್ನೇ ಮುಗಿಸಿದ ಅನಾರೋಗ್ಯ

167

ನ್ಯೂಸ್ ನಾಟೌಟ್ : ಬಾಳಿ ಬದುಕಬದುಕಬೇಕಾಗಿದ್ದ ವಿದ್ಯಾರ್ಥಿಯೋರ್ವ ಅನಾರೋಗ್ಯಕ್ಕೆ ಸುತ್ತಾಗಿ ಕೊನೆಯುಸಿರೆಳೆದ ಘಟನೆ ಸುಳ್ಯ ತಾಲೂಕಿನಿಂದ ವರದಿಯಾಗಿದೆ.

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ವಿಲಾಸ್ ಟಿ. ಎಂಬ ಬಾಲಕ ಮೃತಪಟ್ಟಿದ್ದಾನೆ. ಈತ ದೇವಚಳ್ಳ ಗ್ರಾಮದ ತಳೂರಿನ ಚಂದ್ರಶೇಖರ ಎಂಬವರ ಪುತ್ರ. ದೇವಚಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಂದು ಬೆಳಗ್ಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಬಾಲಕ ತಂದೆ, ತಾಯಿ ಮೋಹಿನಿ ಚಂದ್ರಶೇಖರ ತಳೂರು, ಸಹೋದರಿಯನ್ನು ಅಗಲಿದ್ದಾನೆ.

See also  'ನ್ಯೂಸ್ ನಾಟೌಟ್' ವರದಿ ತಿರುಚಿ ಬರೆದು ಸಿಕ್ಕಿಬಿದ್ದ ಕಿಡಿಗೇಡಿಗಳು..!, ಶೇರ್‌ ಮಾಡಿ ವಿಕೃತಿ ಮೆರೆದವರಿಗೂ ತಟ್ಟಲಿದೆ ಬಿಸಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget