ನ್ಯೂಸ್ ನಾಟೌಟ್: ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಲಾರಿ ಸುಳ್ಯದ ಶ್ರೀರಾಮ್ ಪೇಟೆಯ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ವಾಹನದಟ್ಟಣೆ ಇದ್ದ ಕಾರಣ ಸ್ಕೂಟರ್ ಚಾಲಕ ಕಾರು ಮತ್ತು ಲಾರಿ ಮಧ್ಯೆ ಹೋಗಲು ಮುಂದಾದಾಗ ಲಾರಿಗೆ ಡಿಕ್ಕಿಯಾಗಿದ್ದಾರೆ.
ದ್ವಿಚಕ್ರ ಚಾಲಕನಿಗೆ ಗಾಯಗಳಾಗಿದ್ದು, ಟ್ರಾಫಿಕ್ ನಿರ್ವಹಿಸುತ್ತಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.