Latest

ಸುಳ್ಯ:ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ, “ಪರಿಣಾಮಕಾರಿ  ಸಂವಹನ  ಕೌಶಲ್ಯಗಳು ಮತ್ತು ನಾಯಕತ್ವ” ವಿಷಯದ ಬಗ್ಗೆ ಮಾಹಿತಿ

267

ನ್ಯೂಸ್ ನಾಟೌಟ್ : ಕೆವಿಜಿ ಕಾನೂನು ಕಾಲೇಜಿನಲ್ಲಿ ಉಪನ್ಯಾಸ ಮಾಲಿಕೆಯ ಅಂಗವಾಗಿ, “ಪರಿಣಾಮಕಾರಿ  ಸಂವಹನ  ಕೌಶಲ್ಯಗಳು  ಮತ್ತು ನಾಯಕತ್ವ” ಎಂಬ ವಿಷಯವಾಗಿ ಒಂದು ದಿನದ ವಿಶೇಷ ಉಪನ್ಯಾಸ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾoಶುಪಾಲ ಡಾ. ಉದಯಕೃಷ್ಣ ಬಿ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸುಳ್ಯ ದ ಅಂಜಲಿ  ಮೊಂಟೆಸ್ಸರಿ ಯ ಸಂಚಾಲಕಿ, ಸಂವಹನ ಕೌಶಲ್ಯ ತರಬೇತುದಾರೆ  ಗೀತಾoಜಲಿ ಟಿ.ಜಿ, ಪರಿಣಾಮಕಾರಿ ಸಂವಹನ ಕೌಶಲ್ಯಗಳು  ಮತ್ತು ನಾಯಕತ್ವದ  ವಿಷಯವಾಗಿ ಉಪನ್ಯಾಸ ಮತ್ತು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾoಶುಪಾಲ, ಕಾನೂನು ಕಾಲೇಜಿನ ಆಡಳಿತಾಧಿಕಾರಿ  ಪ್ರೊ ಕೆ ವಿ ದಾಮೋದರ ಗೌಡರು, ” ವೃತ್ತಿಪರ  ಕ್ಷೇತ್ರದಲ್ಲಿ ಸಂವಹನ ಕೌಶಲ್ಯಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ಯಾವುದೇ ವೃತ್ತಿ ಯಲ್ಲಿ ಪರಿಣಾಮಕಾರಿ ಸಂವಹನ ಕೌಶಲ್ಯಗಳನ್ನು ಹೊಂದಿದ್ದಲ್ಲಿ ವೃತ್ತಿಪರ ಯಶಸ್ಸನ್ನು ಹೊಂದಲು ಸಾಧ್ಯ” ಎಂದು ತಿಳಿಸಿದರು.ಕಾಲೇಜಿನ ಆಂತರಿಕ ಗುಣಮಟ್ಟ  ಕೋಶದ  ಸಂಯೋಜಕಿ ರಚನಾ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಿಸಿದ ವಿದ್ಯಾರ್ಥಿನಿ ಜಯಂತಿ ಡಯಾಸ್  ಸ್ವಾಗತಿಸಿ, ವಂದಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

See also  ಸುಳ್ಯದ ಗೂಡ್ಸ್ ವಾಹನ ಪಿರಿಯಾಪಟ್ಟಣದಲ್ಲಿ ಅಪಘಾತ, 27 ವರ್ಷದ ಯುವಕ ದಾರುಣ ಸಾವು..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget