ನ್ಯೂಸ್ ನಾಟೌಟ್: ಸೋಂಣಂಗೇರಿಯಿಂದ ಬೆಳ್ಳಾರೆಗೆ ಸಂಚರಿಸುವಾಗ ಮಧ್ಯದಲ್ಲಿ ಸಿಗುವ ಬೇಂಗಮಲೆಯಿಂದ ಬಾಂಜಿಕೋಡಿಗೆ ಹೋಗುವ ರಸ್ತೆಯಲ್ಲಿ ಜಲ್ಲಿಕಲ್ಲು ಹರಡಿದ್ದು, ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸಿ ವಾಹನ ಚಲಾಯಿಸಬೇಕಿದೆ. ತಪ್ಪಿದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿದೆ.
ರಸ್ತೆಯಲ್ಲಿ ಚೆಲ್ಲಿರುವ ಜಲ್ಲಿಕಲ್ಲಿನಿಂದ ದ್ವಿಚಕ್ರ ಸವಾರರು ನಿಯಂತ್ರಣ ತಪ್ಪಿ ಅಪಘಾತವಾಗುವ ಸಂಭವವಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.