ಕರಾವಳಿ

ಸುಳ್ಯ ಶೂಟೌಟ್ ನ ಹಿಂದೆ ಬಿಜೆಪಿ ಮುಖಂಡ ಕಳಗಿ ಕೊಲೆ ಹಂತಕರು..?

561

ನ್ಯೂಸ್ ನಾಟೌಟ್: ಸುಳ್ಯ ಶೂಟೌಟ್ ಪ್ರಕರಣಕ್ಕೆ ರೋಚಕ ತಿರುವು ದೊರೆತಿದ್ದು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಆದರೆ ಆರೋಪಿಗಳು ಯಾರು? ಎಲ್ಲಿಯವರು? ಎನ್ನುವುದರ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಮೂಲಗಳ ಪ್ರಕಾರ ಕೊಡಗು ಸಂಪಾಜೆಯ ಪ್ರಭಾವಿ ನಾಯಕರಾಗಿದ್ದ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಹತ್ಯೆಯ ಆರೋಪಿಗಳು ಶಾಹಿ ಕೊಲೆಯತ್ನದ ಪ್ರಮುಖ ಆರೋಪಿಗಳಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸರು ಮಾಹಿತಿಯನ್ನು ಗೌಪ್ಯವಾಗಿ ಇಟ್ಟಿದ್ದು ತನಿಖೆಯ ಬಳಿಕವಷ್ಟೇ ಸತ್ಯಾಂಶ ತಿಳಿದು ಬರಲಿದೆ. ಸುಳ್ಯದ ಜಯನಗರದ ಶಾಹಿ ಎನ್ನುವವರ ಮೇಲೆ ಮೊಗರ್ಪಣೆಯ ವೆಂಕಟರಮಣ ಸೊಸೈಟಿ ಬಳಿ ಭಾನುವಾರ ರಾತ್ರಿ ಗುಂಡಿನ ದಾಳಿ ನಡೆದಿತ್ತು. ಶಾಹಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು. ಕಾರು ಗುಂಡಿನ ದಾಳಿಯಿಂದ ಜಖಂಗೊಂಡಿತ್ತು.

See also  ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ:ಎನ್ ಐ ಎಯ ೭ ಸದಸ್ಯರಿಂದ ಶಿಕ್ಷಣ ಸಂಸ್ಥೆಗೆ ದಾಳಿ,ಓರ್ವ ವಿದ್ಯಾರ್ಥಿ ವಶಕ್ಕೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget