ಕರಾವಳಿ

ಶ್ರೀ ಶಾರದಾಂಬಾ ಉತ್ಸವ ಶೋಭಾಯಾತ್ರೆ: ಗಮನ ಸೆಳೆದ ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ಧಚಿತ್ರ, ಜನಮನ ಗೆದ್ದ ಭಜನಾ ಕುಣಿತ, ಆಕರ್ಷಕ ಮೆರವಣಿಗೆ

151

ನ್ಯೂಸ್ ನಾಟೌಟ್: ಶ್ರೀ ಶಾರದಾಂಬಾ ಉತ್ಸವ ದಸರಾ 2023 ಶೋಭಾಯಾತ್ರೆ ಸುಳ್ಯದ ಮುಖ್ಯಪೇಟೆಯಲ್ಲಿ ಅದ್ಧೂರಿಯಾಗಿ ಶನಿವಾರ ಸಾಗಿ ಬಂದಿತು. ವೈಭದ ಶೋಭಾಯಾತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಈ ಶೋಭಾಯಾತ್ರೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಥಬ್ಧಚಿತ್ರ ಸೇರಿದಂತೆ ಹಲವಾರು ಸ್ಥಬ್ಧಚಿತ್ರಗಳು ಗಮನ ಸೆಳೆದವು.

ಈ ಶೋಭಾಯಾತ್ರೆಗೆ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಚಾಲನೆ ನೀಡಲಾಗಿತ್ತು. ಹುಲಿ ಕುಣಿತ, ಕುಣಿತ ಭಜನೆ, ನಾಸಿಕ್ ಬ್ಯಾಂಡ್, ಆಕರ್ಷಕ ಸಿಡಿಮದ್ದು ಅಬ್ಬರದೊಂದಿಗೆ ಹೊರಟಿತು. ಎ.ಪಿ.ಎಂ.ಸಿ., ವಿವೇಕಾನಂದ ವೃತ್ತ , ಜ್ಯೂನಿಯರ್ ಕಾಲೇಜು ರಸ್ತೆ, ಜ್ಯೋತಿ ಸರ್ಕಲ್ ಮೂಲಕ ಹಳೆಗೇಟು ತನಕ ಸಾಗಲಿದೆ. ಅಲ್ಲಿಂದ ಮರಳಿ ಸುಳ್ಯದ ಪ್ರಮುಖ ರಸ್ತೆಯಾಗಿ ಗಾಂಧಿನಗರ, ಕಾಯರ್ತೋಡಿ ವಿಷ್ಣು ಸರ್ಕಲ್ ತನಕ ಸಾಗಿ ಕಾಂತಮಂಗಲದ ಬಳಿ ಪಯಸ್ವಿನಿ ನದಿಯಲ್ಲಿ ವಿಸರ್ಜನೆ ನಡೆಯಲಿದೆ.

See also  ಜ.5 ರಿಂದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಮೇಳ
  Ad Widget   Ad Widget   Ad Widget   Ad Widget   Ad Widget   Ad Widget   Ad Widget