ಕರಾವಳಿಕಾಸರಗೋಡುಕೊಡಗುಸುಳ್ಯ

ಸುಳ್ಯ: ಸಂಪಾಜೆಯಲ್ಲಿ ಬಸ್‌-ಕಾರು ಭೀಕರ ಅಪಘಾತ ಪ್ರಕರಣ, ತುರ್ತು ನಿಗಾ ಘಟಕದಲ್ಲಿದ್ದ ಬಾಲಕ ಪ್ರಾಣಾಪಾಯದಿಂದ ಪಾರು

ನ್ಯೂಸ್ ನಾಟೌಟ್: ಸಂಪಾಜೆಯಲ್ಲಿ ನಡೆದಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ವಿಫ್ಟ್‌ ಕಾರಿನ ನಡುವಿನ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಸುಳ್ಯದ ಕೆವಿಜಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಡಿಹಾನ್(6 ವರ್ಷ) ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕೆವಿಜಿ ಆಸ್ಪತ್ರೆಯ ವೈದ್ಯರ ತಂಡ ತೀವ್ರ ನಿಗಾ ಘಟಕದಲ್ಲಿದ್ದ ಬಾಲಕನ ಪ್ರಾಣ ರಕ್ಷಿಸುವಲ್ಲಿ ಅತ್ಯಂತ ಮುತುವರ್ಜಿಯಿಂದ ಕೆಲಸ ನಿರ್ವಹಿಸಿದ್ದರು. ಅಂತಿಮವಾಗಿ ವೈದ್ಯರ ತಂಡದ ಶ್ರಮದಿಂದ ಬಾಲಕ ಈಗ ಚೇತರಿಸಿಕೊಂಡಿದ್ದಾನೆ. ಸದ್ಯ ಬಾಲಕನ ತಂದೆ-ತಾಯಿ ಮಂಡ್ಯದಿಂದ ಬಂದು ಬಾಲಕನನ್ನುಹೆಚ್ಚಿನ ಚಿಕಿತ್ಸೆಗಾಗಿ ತಮ್ಮ ಊರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ರಜೆ ಇದ್ದುದರಿಂದ ಬಾಲಕ ಹಾಗೂ ಆತನ ಅಣ್ಣ ತನ್ನ ಚಿಕ್ಕಮ್ಮನ ಜತೆ ಪ್ರವಾಸ ಹೊರಟ್ಟಿದ್ದರು ಎಂದು ತಿಳಿದುಬಂದಿದೆ. ಕಾರಿನಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಬಿಹಾನ್ ನ ಸಹೋದರ ಸಾವಿಗೀಡಾಗಿದ್ದಾನೆ. ಸದ್ಯ ಗಾಯಗೊಂಡಿರುವ ಮತ್ತೋರ್ವ ವ್ಯಕ್ತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Related posts

ಪುತ್ತೂರು: ರಬ್ಬರ್ ತೋಟದಲ್ಲಿ ಕರುವನ್ನು ತಿಂದು ಮರಕ್ಕೆ ನೇತಾಡಿಸಿದ ಚಿರತೆ..! ಎಚ್ಚರಿಕೆಯಿಂದ ಇರುವಂತೆ ಗ್ರಾಮಸ್ಥರಿಗೆ ಸೂಚನೆ

ಸುಳ್ಯ: ಆಟೋ ರಿಕ್ಷಾಕ್ಕೆ ಗುದ್ದಿ ಪಿಕಪ್ ಸಹಿತ ಚಾಲಕ ಪರಾರಿ

ಸುಬ್ರಹ್ಮಣ್ಯ: ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್ ಮೇಲ್..! ನಗ್ನ ವಿಡಿಯೋ ಚಿತ್ರೀಕರಿಸಿ ಲಕ್ಷ..ಲಕ್ಷಕ್ಕೆ ಬೇಡಿಕೆ ಇಟ್ಟವ ಸಿಕ್ಕಿಬಿದ್ದಿದ್ದು ಹೇಗೆ..?