ಕರಾವಳಿ

ಸುಳ್ಯ: ಪಾಮ್ ಆಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ..! ತಡರಾತ್ರಿ ಆಸ್ಪತ್ರೆಯೊಳಗೊಂದು ಒದ್ದಾಟ..!

ನ್ಯೂಸ್ ನಾಟೌಟ್: ಯುವಕನೊಬ್ಬ ಪಾಮ್ ಆಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸುಳ್ಯದ ಗಾಂಧಿನಗರದಿಂದ ವರದಿಯಾಗಿದೆ.

ಅಕ್ಟೋಬರ್ 31ರಂದು ತಡರಾತ್ರಿ ಗಾಂಧಿನಗರದಲ್ಲಿ ಗೋವಿಂದ ಎಂಬ ಉತ್ತರ ಕರ್ನಾಟಕ ಮೂಲದ ಯುವಕನೊಬ್ಬನಿಗೆ ತನ್ನ ಪರಿಚಿತರ ಜೊತೆಗೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ವಿಪರೀತ ಮಟ್ಟಕ್ಕೆ ಹೋಗಿದೆ. ಈ ವೇಳೆ ಸಿಟ್ಟಿನಿಂದ ಗೋವಿಂದ ಪಾಮ್ ಆಯಿಲ್ ಕುಡಿದಿದ್ದಾನೆ. ನಂತರ ಈತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಆತನನ್ನು ಪರೀಕ್ಷಿಸಿದ ವೈದ್ಯರು ಕುಡಿದಿದ್ದನ್ನು ಕಕ್ಕಿಸಿದ್ದಾರೆ. ಅಂತಿಮವಾಗಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮದ್ಯಪಾನದಿಂದ ಗಲಾಟೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Related posts

ಡಿಜಿಟಲ್ ಪತ್ರಕರ್ತರಿಗೂ ಮಾನ್ಯತೆ

ಹೂವಿನ ಗಿಡ ತಿಂದಿದ್ದಕ್ಕೆ ಗೋಮಾತೆಯ ಕಣ್ಣನ್ನೇ ಕಿತ್ತ ರಾಕ್ಷಸ

ದೈವ ನರ್ತಕನಿಂದಲೇ ಕೊರಗಜ್ಜನಿಗೆ ಅಪಚಾರ