ನ್ಯೂಸ್ ನಾಟೌಟ್ : ಸುಳ್ಯ ಪೊಲೀಸ್ ಠಾಣೆಗೆ ಹೊಸ ಸಬ್ಇನ್ಸ್ಪೆಕ್ಟರ್ (ಎಸ್ಐ) ಈರಯ್ಯ ದೂಂತೂರು ಆಗಮಿಸಿ ಸೋಮವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದ್ದಾರೆ.
ಖಡಕ್ ಆಫೀಸರ್ ಎಂದೇ ಗುರುತಿಸಿಕೊಂಡಿರುವ ಈರಯ್ಯ ದೂಂತೂರು ಕಾನೂನು ಸುವ್ಯವಸ್ಥೆ ಪಾಲನೆಯ ವಿಚಾರದಲ್ಲಿ ಶಿಸ್ತಿನ ಸಿಪಾಯಿಯಾಗಿದ್ದಾರೆ. ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ಗುರಿಯೊಂದಿಗೆ ಈರಯ್ಯ ದೂಂತೂರು ಸುಳ್ಯಕ್ಕೆ ಕಾಲಿಟ್ಟಿದ್ದಾರೆ. ಕುಂದಾಪುರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಇಂದು ಮಧ್ಯಾಹ್ನ ಎಸ್ಐ ದಿಲೀಪ್ ಜಿ. ಆರ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಈರಯ್ಯ ದೂಂತೂರು ಅವರು ಈ ಹಿಂದೆ ಬೆಳ್ಳಾರೆ , ಉಪ್ಪಿನಂಗಡಿ , ಶಿರಸಿಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಕೆಲಸ ಮಾಡಿದ ಎಲ್ಲ ಕಡೆ ಈರಯ್ಯ ದೂಂತೂರು ಅತ್ಯಂತ ಕಟ್ಟು ನಿಟ್ಟಿನ ವ್ಯಕ್ತಿ ಎಂದೇ ಗುರುತಿಸಿಕೊಂಡಿದ್ದಾರೆ. ಗೂಂಡಾಗಿರಿ, ಪುಂಡಾಟ ನಡೆಸುವ ವ್ಯಕ್ತಿಗಳಿಗೆ ಈರಯ್ಯ ದೂಂತೂರು ಸಿಂಹಸ್ವಪ್ನವಾಗಿದ್ದಾರೆ. 2014 ರಲ್ಲಿ ಅಧಿಕಾರಿಯಾದ ಇವರು ಬಂಟ್ವಾಳ ಹಾಗೂ ವಿಟ್ಲದಲ್ಲಿ ಪ್ರೊಬೇಷನರಿ ಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ, ಕವಿಯೂ ಸಾಹಿತಿಯೂ , ಕ್ರೀಡೆಯಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಸುಳ್ಯಕ್ಕೆ ಹೊಸದಾಗಿ ಕರ್ತವ್ಯಕ್ಕೆ ಹಾಜರಾದ ಅವರನ್ನು ನ್ಯೂಸ್ ನಾಟೌಟ್ ವತಿಯಿಂದ ಪ್ರತಿನಿಧಿ ಶ್ರೀಜಿತ್ ಸಂಪಾಜೆ ಹೂ ನೀಡಿ ಸ್ವಾಗತಿಸಿದರು.