ನ್ಯೂಸ್ ನಾಟೌಟ್: ಕಳೆದ ಕೆಲ ದಿನಗಳಿಂದ ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಸುಳ್ಯದ ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಿದ ಸುಳ್ಯ ನಾಗಪಟ್ಟಣದಲ್ಲಿರುವ ವೆಂಟೆಡ್ ಡ್ಯಾಮ್ನ ಎಲ್ಲಾ 14 ಗೇಟ್ಗಳನ್ನು ತೆರೆಯಲಾಗಿದೆ.
ಈ ಹಿಂದೆ ಮಳೆ ಆರಂಭವಾದರೂ 14 ಗೇಟ್ಗಳ ಪೈಕಿ 4 ಷಟರ್ಗಳನ್ನು ಮಾತ್ರ ಪೂರ್ತಿ ತೆರೆಯಲಾಗಿತ್ತು. ಎರಡು ಅರ್ಧಕ್ಕೆ ತೆರೆಯಲಾಗಿತ್ತು. ಉಳಿದ ಗೇಟ್ಗಳನ್ನು ತೆರೆದಿರಲಿಲ್ಲ. ನೀರು ಹೆಚ್ಚಳ ಆದರೂ ಗೇಟ್ ತೆರೆಯದ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ಶೀಘ್ರ ಡ್ಯಾಮ್ನ ಗೇಟ್ ತೆರೆಯುವಂತೆ ಆಗ್ರಹಿಸಿದ್ದರು. ಅದರಂತೆ ತಹಶೀಲ್ದಾರ್ ಅವರು ಡ್ಯಾಮ್ನ ಗೇಟ್ಗಳನ್ನು ಕೂಡಲೇ ತೆರೆಯುವಂತೆ ಇಂಜಿನಿಯರ್ ಗಳಿಗೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಎಲ್ಲಾ ಗೇಟ್ಗಳನ್ನು ತೆರೆಯಲಾಗಿದೆ. ಸುಳ್ಯ ನಗರ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಡ್ಯಾಂನಲ್ಲಿ ಬೇಸಿಗೆಯಲ್ಲಿ ಷಟರ್ ಹಾಕಿ ನೀರು ಶೇಖರಣೆ ಮಾಡಲಾಗುತ್ತದೆ. ಮಳೆಗಾಲ ಅರಂಭವಾದೊಡನೆ ಷಟರ್ಗಳನ್ನು ತೆರೆಯಲಾಗುತ್ತದೆ.