ಕರಾವಳಿ

ಸುಳ್ಯದ ಕೆವಿಜಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಥ್ ಲ್ಯಾಬ್ ಉದ್ಘಾಟನೆ, ಹೃದಯ ಸಂಬಂಧಿತ ರೋಗಿಗಳಿಗೆ ಸಂಜೀವಿನಿ ಈ ಕ್ಯಾಥ್ ಲ್ಯಾಬ್ ಹೇಗೆ..?

ನ್ಯೂಸ್ ನಾಟೌಟ್: ಕೆವಿಜಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಹೃದಯ ಸಂಬಂಧಿತ ಅತ್ಯಾಧುನಿಕ ಸೌಲಭ್ಯವುಳ್ಳ ಕ್ಯಾಥ್ ಲ್ಯಾಬ್ ಅನ್ನು ಉದ್ಘಾಟನೆ ಮಾಡಲಾಗಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಅಧ್ಯಕ್ಷರಾದ ಡಾ ಕೆವಿ ಚಿದಾನಂದ ಅವರು ದೀಪ ಬೆಳಗಿಸಿ ಶಸ್ತ್ರ ಚಿಕಿತ್ಸೆ ರಹಿತ ಹೃದಯ ಸಂಬಂಧಿತ ಚಿಕಿತ್ಸೆಯ ಈ ಲ್ಯಾಬ್ ಗೆ ಚಾಲನೆ ನೀಡಿದರು.

ಅತ್ಯಂತ ಕಡಿಮೆ ದರದಲ್ಲಿ ರೋಗಿಗಳಿಗೆ ಲಭ್ಯವಾಗುವ ರೀತಿಯಲ್ಲಿ ಈ ಲ್ಯಾಬ್ ನ ಸೌಲಭ್ಯ ದೊರೆಯಲಿದೆ. ಇದರ ಅನುಕೂಲವನ್ನು ರೋಗಿಗಳು ಪಡೆದುಕೊಳ್ಳಬೇಕು ಎಂದು ಡಾ ಕೆವಿ ಚಿದಾನಂದ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷೆ ಶೋಭಾ ಚಿದಾನಂದ, ಜಗದೀಶ್ ಅಡ್ತಲೆ, ಡೀನ್ ನೀಲಾಂಬಿಕೈ ನಟರಾಜನ್, ಡಾ | ವಿಶು ಕುಮಾರ್, ಡಾ | ಸಿ.ಆರ್. ಭಟ್, ಡಾ | ಸುಬ್ರಹ್ಮಣ್ಯ, ಡಾ | ಸತ್ಯವತಿ ಆಳ್ವ, ಡಾ | ಗೀತಾ ದೊಪ್ಪ, ಡಾ | ನವ್ಯ, ಡಾ | ಪ್ರಕಾಶ್ ರಾವ್ ಉಪಸ್ಥಿತರಿದ್ದರು. ಪ್ರತಿ ಬುಧವಾರದಂದು ಚಿಕಿತ್ಸೆಗೆ ರೋಗಿಗಳು ಬರಬಹುದಾಗಿದ್ದು ತಜ್ಞ ವೈದ್ಯರಾದ ಡಾ | ವಿಶು ಕುಮಾರ್ ಹಾಗೂ ಡಾ ಭರತೇಶ್ ಅವರು ಸೇವೆಗೆ ಲಭ್ಯವಿದ್ದಾರೆ.

Related posts

ಅಪಘಾತ: ಲಕ್ಷಾಂತರ ಮೌಲ್ಯದ ಮದ್ಯ, ಮಾರಾಕಾಸ್ತ್ರಗಳು ಪತ್ತೆ! ಕಾರಿನಲ್ಲಿ ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್‌ ನೋಡಿ ಸ್ಥಳೀಯರಿಗೆ ಶಾಕ್ !

ಟಿಕೇಟ್‌ ಘೋಷಣೆಯಾಗುತ್ತಲೇ ಬಿಜೆಪಿಯೊಳಗೆ ರಾಜಕೀಯ ನಿವೃತ್ತಿ, ಕಾಂಗ್ರೆಸ್ ನಲ್ಲೂ ಎದ್ದಿದೆ ಅಲ್ಲೋಲ ಕಲ್ಲೋಲ..!

ಸಂಪಾಜೆ: ಇವರು ದೇಶ ಕಾದ ಸೈನಿಕ ಮಾತ್ರವಲ್ಲ ನದಿ, ಬಾವಿಗಳಿಂದ ಶವಗಳನ್ನೂ ಮೇಲೆತ್ತಿದ ಸಾಹಸಿ..!, ಆರ್ಮಿ ಮ್ಯಾನ್ ಕೆ.ಪಿ ಮತ್ತು ಸಾಹಸಗಾಥೆ