ರಾಜಕೀಯವೈರಲ್ ನ್ಯೂಸ್ಸುಳ್ಯ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ |ಚಿದಾನಂದ ಕೆವಿ ಅವರ ಮನೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಭೇಟಿ, ಹಲವಾರು ಕಾಂಗ್ರೆಸ್ ನಾಯಕರು ಭಾಗಿ

157

ನ್ಯೂಸ್ ನಾಟೌಟ್: ಸುಳ್ಯದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಜಿ ಶಿಕ್ಷಣ ಸಂಸ್ಥೆಗಳ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ ಚಿದಾನಂದ ಅವರ ಮನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪದ್ಮರಾಜ್ ಶನಿವಾರ ಭೇಟಿ ನೀಡಿದರು.

ವಾರಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಬ್ರಿಜೇಶ್ ಚೌಟ ಅವರು ಭೇಟಿ ನೀಡಿದ್ದನ್ನು ಸ್ಮರಿಸಬಹುದು. ಡಾ | ಕೆ.ವಿ ಚಿದಾನಂದ ಅವರ ಮನೆಗೆ ಭೇಟಿ ನೀಡಿರುವ ಪದ್ಮರಾಜ್ ಅವರು ಲಘು ಉಪಹಾರವನ್ನು ಸ್ಮೀಕರಿಸಿ ಕೆಲವು ಸಮಯಗಳ ಕಾಲ ಕಳೆದರು. ಇದೇ ವೇಳೆ ಹಿರಿಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಸುಳ್ಯ ತಾಲೂಕಿನಾದ್ಯಂತ ಪ್ರವಾಸಗೈಯುತ್ತಿರುವ ಪದ್ಮರಾಜ್ ಅವರು ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಉಸ್ತುವಾರಿ ಜಿ. ಕೃಷ್ಣಪ್ಪ, ಎಂಎಲ್ ಸಿ ಹರೀಶ್ ಕುಮಾರ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ,ಸಿ ಜಯರಾಮ್, ಕಿರಣ್ ಬುಡ್ಲೆಗುತ್ತು, ಜಯ ಪ್ರಕಾಶ್ , ಶಾಫಿ ಕುತ್ತಮೊಟ್ಟೆ ಮತ್ತಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

See also  ಅಭಿವೃದ್ಧಿ ಕಾಮಗಾರಿಗೆ 5ನೇ ತರಗತಿ ಬಾಲಕಿ ಬಲಿಯಾದದ್ದೇಗೆ? ಹೊಲದ ಕೆಲಸ ಮುಗಿಸಿ ಬಂದ ತಂದೆ-ತಾಯಿಗೆ ಕಾದಿತ್ತು ಶಾಕ್!
  Ad Widget   Ad Widget   Ad Widget   Ad Widget   Ad Widget   Ad Widget   Ad Widget