ನ್ಯೂಸ್ ನಾಟೌಟ್: ಸುಳ್ಯದ ಗಾಂಧಿನಗರ ಸಮೀಪದ ಕಲ್ಲಮುಟ್ಲು ಕಡೆಗೆ ಸಂಚರಿಸುವ ಕಾಂಕ್ರೀಟ್ ರಸ್ತೆಯಲ್ಲಿ ನಿರ್ಮಿಸಿರುವ ಹಂಪ್ ನಿಂದಾಗಿ ಇಲ್ಲಿ ನಿತ್ಯ ಸಂಚರಿಸುವ ವಾಹನ ಚಾಲಕರು ತೊಂದರೆ ಅನುಭವಿಸಬೇಕಾಗಿದೆ.
ಇದರಿಂದ ದಿಚಕ್ರ ಸವಾರರು ಮತ್ತು ಇತರ ವಾಹನ ಚಾಲಕರು ಪ್ರತಿ ನಿತ್ಯ ಸರ್ಕಸ್ ಮಾಡಿಕೊಂಡು ಸಂಚರಿಸಬೇಕಾಗಿದೆ. ಹಂಪ್ ಚಡಾವಿನಲ್ಲಿ (ಏರಿಳಿತ) ನಿರ್ಮಿಸಿರುವುದರಿಂದ ವಾಹನ ಅರ್ಧದಲ್ಲಿ ಬಾಕಿಯಾಗಿ ವಾಪಸ್ ಬಂದು ತೊಂದರೆಯಾದ ಹಲವಾರು ಘಟನೆಗಳು ಈ ಭಾಗದಲ್ಲಿ ಸಂಭವಿಸಿದೆ.
ಆದ್ದರಿಂದ ತಕ್ಷಣ ಈ ಅನಧಿಕೃತ ಹಂಪ್ ತೆರವುಗೊಳಿಸಿ ಕಲ್ಲುಮುಟ್ಲುವಿಗೆ ಸಂಚರಿಸುವ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಕಲ್ಲುಮುಟ್ಲು ಗ್ರಾಮಸ್ಥರು ಇಂದು (ಮಾ.24) ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭ ಕೆ.ಎಂ. ಮೊಯಿದ್ದೀನ್ ಕಲ್ಲುಮುಟ್ಲು ಸ್ಥಳೀಯರಾದ ಜಯರಾಮ ನಾಯರ್, ರಫೀಕ್, ಕೆ.ಎಸ್. ಮುನೀರ್, ಅಬ್ಬಾಸ್ ಎ.ಎಂ. ಕಲ್ಲುಮುಟ್ಲು, ಇಬ್ರಾಹಿಂ ಎಚ್.ಎಂ., ರಿಜ್ವಾನ್, ಮಹಮ್ಮದ್ ರಫೀಕ್,ಅದ್ರಾಮ ಕೆ.ಎಸ್. ದಿಲೀಪ್, ಸರಸ್ವತಿ, ಪುಷ್ಪಾವತಿ ಮತ್ತಿತರರು ಉಪಸ್ಥಿತರಿದ್ದರು.