ನ್ಯೂಸ್ ನಾಟೌಟ್: ಇತ್ತೀಚಿಗೆ ನಮ್ಮ ಸುಳ್ಯದಲ್ಲಿ ರಸ್ತೆಗಳು ಹೊಂಡ ಗುಂಡಿಗಳ ಮೇಲೆ ಇವೆಯೋ ಅಥವಾ ಹೊಂಡ ಗುಂಡಿಗಳ ಮೇಲೆಯೇ ರಸ್ತೆಗಳಿವೆಯೋ ಅನ್ನುವುದೇ ಗೊತ್ತಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಎಷ್ಟು ಸಲ ಮನವಿ ಮಾಡಿದರೂ ಯಾರಿಗೆ ಹೇಳಿದರೂ ಹೊಂಡ ಗುಂಡಿಗಳು ಮಾತ್ರ ಜನರನ್ನು ನೋಡಿ ಪ್ರತಿ ದಿನ ಅಣಕಿಸುತ್ತಲೇ ಇರುತ್ತವೆ. ಜನರೋ ಓಟು ಹಾಕಿದ ಕರ್ಮಕ್ಕೆ ಹಿಡಿಶಾಪ ಹಾಕಿಕೊಂಡಿ ಓಡಾಡುತ್ತಲೇ ಇರುತ್ತಾರೆ.
ಮನವಿ ನೀಡಿ ಸಾಕಾಗಿ ಅಧಿಕಾರಿಗಳು ಸರಿ ಮಾಡಿಸದೆ ಇರುವುದರಿಂದ ರೊಚ್ಚಿ ಗೆದ್ದ ಸುಳ್ಯದ
ಕೆವಿಜಿ ಭಾಗ್ ‘ಜೈ ಜವಾನ್’ ಆಟೋ ಚಾಲಕರು ತಾವೇ ಹಾರೆ ಪಿಕಾಸು ಹಿಡಿದು ರಸ್ತೆಯಲ್ಲಿದ್ದ ಯಮ ಸ್ವರೂಪಿ ಗುಂಡಿಗಳನ್ನು ಮುಚ್ಚಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
View this post on Instagram
ನಿತ್ಯಾನಂದ ಶರತ್ ಕುಕುಟ್ಟಿ, ಧರ್ಮಪಾಲ, ಜೀವನ್ ಸೇರಿದಂತೆ ಹಲವಾರು ಆಟೋ ಚಾಲಕರು ಈ ಸಮಾಜಮುಖಿ ಕೆಲಸ ಮಾಡಿದ್ದಾರೆ. ಸುಳ್ಯದ ರಸ್ತೆಗಳು ತೀರ ಇಕ್ಕಟ್ಟಾಗಿವೆ. ಇರುವ ಓಡಾಟದ ಜಾಗೆಗಳೆಲ್ಲ ಗುಂಡಿಯಾಗಿದ್ದು ಜನರು, ಅನಾರೋಗ್ಯ ಪೀಡಿತರು, ವಿದ್ಯಾರ್ಥಿಗಳು ನಿತ್ಯ ಸಂಕಟ ಪಡುವಂತಾಗಿದೆ. ಈ ಕಷ್ಟ ಎಂದು ಪರಿಹಾರವಾಗುವುದು ಎನ್ನುವುದನ್ನು ಕಾದು ನೋಡಬೇಕಿದೆ.