ಕರಾವಳಿಸುಳ್ಯ

ಸುಳ್ಯ: ಆಂಬ್ಯುಲೆನ್ಸ್ ಅಫಘಾತ, ರೋಗಿ ಅಪಘಾತದ ಮೊದಲೇ ಮೃತ್ಯು ಶಂಕೆ ?

317

ನ್ಯೂಸ್ ನಾಟೌಟ್ : ಸುಳ್ಯ ಸರ್ಕಾರಿ ಆಸ್ಪತ್ರೆಯಿಂದ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಅಡ್ಯಾರ್ ಕಣ್ಣೂರು ಬಳಿ ಆಂಬುಲೆನ್ಸ್ ವಾಹನ ಪಿಕಪ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಸಂಭವಿಸಿದೆ.

ಜನವರಿ 27 ರಂದು ನಡೆದಿದೆ.ಸುಳ್ಯದ ಆಲಟ್ಟಿ ಗ್ರಾಮದ ಎಲಿಕ್ಕಳ ನಿವಾಸಿ ಆನಂದ ಗೌಡ ಎಂಬುವವರನ್ನು ಶ್ವಾಸದ ಸಮಸ್ಯೆ ಕಾರಣ ಸುಳ್ಯ ಜ್ಯೋತಿ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ನಿರ್ದೇಶನದ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದರು.

ಮಂಗಳೂರಿಗೆ ರೋಗಿಯನ್ನು ಕೊಂಡೊಯ್ಯುತ್ತಿದ್ದ ಸಂದರ್ಭ ಅಡ್ಯಾರ್ ಕಣ್ಣೂರು ಬಳಿ ಪಿಕಪ್ ವಾಹನಕ್ಕೆ ಅಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಅಂಬುಲೆನ್ಸ್ ಚಾಲಕ ಸುಳ್ಯ ಜಯನಗರ ನಿವಾಸಿ ಪ್ರಶಾಂತ್ ಎಂದು ತಿಳಿದುಬಂದಿದೆ. ಸಣ್ಣ-ಪುಟ್ಟ ಗಾಯದಿಂದ ಪಾರಾಗಿದ್ದು ವಾಹನ ಜಖಂಗೊಂಡಿದೆ. ಅಂಬುಲೆನ್ಸ್‌ನಲ್ಲಿದ್ದ ರೋಗಿ ಅಪಘಾತಕ್ಕೆ ಮುನ್ನವೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

See also  ಕಾಂಗ್ರೆಸ್ ಬೆಂಬಲಿಸಿದರೆ ಮತೀಯವಾದಿಗಳು ವಿಜೃಂಭಿಸುತ್ತಾರೆ! ಮತ್ತೊಂದು ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ ಆಗಲು ಬಿಡಬಾರದು ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಕರೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget