ನ್ಯೂಸ್ ನಾಟೌಟ್: ವಾರದ ಹಿಂದೆ ಅನಾಥ ಶವವೊಂದು ಸುಳ್ಯ ಸಮೀಪದ ಅರಂಬೂರಿನಲ್ಲಿ ಸಿಕ್ಕಿತ್ತು. ಅದನ್ನು ತಂದು ಸುಳ್ಯದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಮನೆಯವರು ಯಾರಾದರೂ ಇದ್ದರೆ ಮೃತದೇಹವನ್ನು ಪಡೆದುಕೊಂಡು ಹೋಗುವಂತೆ ತಿಳಿಸಲಾಗಿತ್ತು. ಘಟನೆ ನಡೆದು ಒಂದು ವಾರವಾದರೂ ಮನೆಯವರು ಯಾರೂ ಬರಲಿಲ್ಲ. ಹೀಗಾಗಿ ಕೇರ್ಪಳದಲ್ಲಿ ದಫನ ಮಾಡಲಾಗಿದೆ. ಈ ವೇಳೆ ಸ್ಥಳೀಯ ಪಂಚಾಯತ್ ಕಾರ್ಮಿಕರು, ಪ್ರಗತಿ ಆಂಬುಲೆನ್ಸ್ ಮಾಲೀಕ ಅಚ್ಚು ಪ್ರಗತಿ, ಪೊಲೀಸ್ ಅನು ಕುಮಾರ್, ಮಹಿಳಾ ಪೊಲೀಸ್ ಸಿಬ್ಬಂದಿ ಮಮತಾ ಮತ್ತಿತರರು ಹಾಜರಿದ್ದರು.