ಕರಾವಳಿಕ್ರೈಂಸುಳ್ಯ

ಸುಳ್ಯ: ಎಲೆಕ್ಟ್ರಿಷಿಯನ್ ಸತ್ಯಣ್ಣನ ಪಾರ್ಥೀವ ಶರೀರ ಹಳೆಗೇಟಿಗೆ ಆಗಮನ, ಶಾಪ್ ಮುಂದೆ ಮೃತದೇಹ ಕಂಡು ಕಣ್ಣೀರಾದ ಬಂಧು ಬಳಗ

ನ್ಯೂಸ್ ನಾಟೌಟ್: ಎಲ್ಲರೊಂದಿಗೆ ಚೆನ್ನಾಗಿ ಬೆರೆತು ಇದ್ದಕ್ಕಿದ್ದ ಹಾಗೆ ದೇವರ ಪಾದ ಸೇರಿದ ಸುಳ್ಯದ ಹಳೆಗೇಟಿನ ಎಲೆಕ್ಟ್ರಿಷಿಯನ್ ಸತ್ಯಣ್ಣ ಅವರ ಪಾರ್ಥೀವ ಶರೀರ ಇದೀಗ (ಜೂ.14) ಸುಳ್ಯಕ್ಕೆ ಆಗಮಿಸಿದೆ.

ಪ್ರಗತಿ ಆಂಬ್ಯುಲೆನ್ಸ್ ನಲ್ಲಿ ಸುಳ್ಯಕ್ಕೆ ಮೃತದೇಹವನ್ನು ಮಂಗಳೂರಿನಿಂದ ಕರೆದುಕೊಂಡು ಬರಲಾಯಿತು. ಈ ವೇಳೆ ಕುಟುಂಬಸ್ಥರು, ಸ್ನೇಹಿತರು ಎಲ್ಲರ ಕಣ್ಣಾಲಿಗಳು ಸತ್ಯಣ್ಣನ ಪಾರ್ಥೀವ ಶರೀರ ನೋಡಿ ತೇವಗೊಂಡವು. ಎರಡು ದಿನಗಳ ಹಿಂದೆ ಸತ್ಯಣ್ಣ ಅವರು ಇದ್ದಕ್ಕಿದ್ದಂತೆ ಶಾಪ್ ನಲ್ಲಿ ಕುಸಿದು ಬಿದ್ದಿದ್ದರು. ತಲೆಗೆ ಸಂಬಂಧಪಟ್ಟ ಆಂತರಿಕ ಸಮಸ್ಯೆಗೆ ತುತ್ತಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಜೀವನ್ಮರಣ ಹೋರಾಟ ನಡೆಸಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಸದ್ಯ ಅವರ ಮೃತದೇಹವನ್ನು ಇಲ್ಲಿಂದ ಅವರ ಹುಟ್ಟೂರು ಮುಳ್ಳೇರಿಯಾಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದು ಬಂದಿದೆ.

Related posts

ಸುಳ್ಯ: ತಲವಾರು ಹಿಡಿದು ಬೈಕ್‌ನಲ್ಲಿ ಬಂದ ಅಪರಿಚಿತರು..! ಗಾಂಧಿನಗರದಲ್ಲಿ ರಾಜಾರೋಷದಿಂದ ಭಯದ ವಾತಾವರಣ ನಿರ್ಮಿಸಿದವರು ಯಾರು..?

ಬಾಲಚಂದ್ರ ಕಳಗಿಯವರ ಸ್ಮರಣಾರ್ಥ ಲಕ್ಕಿಡಿಪ್, ಆದರ್ಶ ಫ್ರೆಂಡ್ಸ್ ಕ್ಲಬ್ ಚೆಡಾವು ಸಂಪಾಜೆ ಆಯೋಜನೆ, ಇಲ್ಲಿದೆ ವಿಜೇತರ ಪಟ್ಟಿ

10 ಸಾವಿರ ಫಲಾನುಭವಿಗಳ ಬಿಎಪಿಎಲ್ ಕಾರ್ಡ್ ರದ್ದು, 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂಬ ವಿಚಾರಕ್ಕೆ ಆಹಾರ ನಾಗರಿಕ ಸರಬರಾಜು ಇಲಾಖೆ ಹೇಳಿದ್ದೇನು..?