ಕರಾವಳಿ

ಸುಳ್ಯ ಹಬ್ಬ ಸಮಿತಿ ಅಧ್ಯಕ್ಷರಾಗಿ ಪಿ.ಸಿ ಜಯರಾಮ ಪುನರಾಯ್ಕೆ

970

ಸುಳ್ಯ : ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮದಿನವನ್ನು ಕೆ.ವಿ.ಜಿ. ಸುಳ್ಯ ಹಬ್ಬ ವನ್ನಾಗಿ ಆಚರಿಸುತ್ತಿರುವ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಪಿ.ಸಿ.ಜಯರಾಮ್ ಪುನರಾಯ್ಕೆಯಾಗಿದ್ದಾರೆ.  ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಾಕ್ಷಿ ಜೆ ರೈ , ಖಜಾಂಚಿಯಾಗಿ ದಿನೇಶ್ ಮಡ್ತಿಲ ಅವರು ಕೂಡ ಮುಂದಿನ ವರ್ಷಕ್ಕೆ ಮರು ಆಯ್ಕೆಗೊಂಡರು. ಸಮಿತಿಯ 2020 – 2021 ನೇ ಸಾಲಿನ ಮಹಾಸಭೆ ಇಂದು ಕೆವಿಜಿ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಪಿ.ಸಿ.ಜಯರಾಮ್ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ. ವಿ . ಚಿದಾನಂದ ಮುಖ್ಯ ಅತಿಥಿಯಾಗಿದ್ದರು. ಸಮಿತಿಯ ಗೌರವ ಸಲಹೆಗಾರ ಡಾ.ಹರಪ್ರಸಾದ್ ತುದಿಯಡ್ಕ, ನಿಕಟಪೂರ್ವ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ,ಪ್ರಧಾನ ಕಾರ್ಯದರ್ಶಿ ಚಂದ್ರಾಕ್ಷಿ ಜೆ ರೈ, ಖಜಾಂಚಿ ದಿನೇಶ್ ಮಡ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಪಿ ಸಿ ಜಯರಾಮರು ಸ್ವಾಗತಿಸಿದರು ಬಳಿಕ ಚಂದ್ರಾಕ್ಷಿ ಜೆ.ರೈ ಯವರು ಕಳೆದ 1 ವರ್ಷದ ಕಾರ್ಯಕ್ರಮಗಳ ವರದಿ ವಾಚಿಸಿದರು. ದಿನೇಶ್ ಮಡ್ತಿಲ ರವರು ಲೆಕ್ಕಪತ್ರ ಮಂಡಿಸಿದರು.

See also  ಅರೆರೇ...ಈ ಮಹಿಳೆಯ ನಾಲಿಗೆಯಲ್ಲಿ ಕೂದಲು..!, ಕೂದಲಿಗೆ ಕಾರಣವಾಗಿದ್ದು ಏನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget