ನ್ಯೂಸ್ ನಾಟೌಟ್: ರಾಜ್ಯ ಬಿಜೆಪಿಯೊಳಗೆ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಆರಂಭಗೊಂಡಿದೆ. ಇದೀಗ ಸುಳ್ಯದ ಬಿಜೆಪಿ ಕಚೇರಿಯಲ್ಲೂ ಪಕ್ಷದ ಚಟುವಟಿಕೆ ಗರಿಗೆದರಿಕೊಂಡಿದೆ.
ಇತ್ತೀಚೆಗೆ ಬಿಜೆಪಿ ಕಚೇರಿಯಲ್ಲಿ ಅಸಮಾಧಾನದ ಹೊಗೆ, ಪಕ್ಷದ ಕಚೇರಿಗೆ ಬೀಗ ಜಡಿದ ಹೈಡ್ರಾಮಾ ನಡೆದಿತ್ತು. ಆ ನಂತರದ ಬೆಳವಣಿಯಾಗಿ ಇದೀಗ ಪ್ರಧಾನಿ ಮೋದಿ ಸಾಧನೆಗಳ ಕಾರ್ಯಕ್ರಮವನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ” ಗ್ರಾಮ ಚಲೋ” ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ವೆಂಕಟ್ ವಳಲಂಬೆ ಸಭಾಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ವಿನಯ್ ಕುಮಾರ್ ಕಂದಡ್ಕ ಸೇರಿದಂತೆ ಹಲವಾರು ಮಂದಿ ಬಿಜೆಪಿ ನಾಯಕರು ಉಪಸ್ಥಿತರಿದ್ದರು.