ನ್ಯೂಸ್ ನಾಟೌಟ್: ಅಡ್ಕಾರ್ ಸೇತುವೆ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ.
ಮಳೆ ಬಂದ ಬೆನ್ನಲ್ಲೇ ಬುಧವಾರ ಸಂಜೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆನೆಗುಂಡಿಯಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದುದರಿಂದ ವಿದ್ಯುತ್ ಸಂಪರ್ಕ ಕಂಡಿತಗೊಂಡಿದ್ದು ಸುಳ್ಯದ ಜನತೆ ತಲೆಬಿಸಿಯಲ್ಲಿದ್ದಾರೆ. ವಿದ್ಯುತ್ ಸರಿಪಡಿಸುತ್ತಿರುವಂತಹ ಕೆಲಸ ನಡೆಯುತ್ತಿದ್ದಾಗ ಸ್ವಲ್ಪ ಚಾರ್ಜ್ ಮಾಡಲಾಗಿದೆ. ಈ ವೇಳೆ ಸ್ಪಾರ್ಕ್ ಆಗಿ ಬೆಂಕಿ ಕಿಡಿ ಒಣ ಹುಲ್ಲಿನ ಮೇಲೆ ಬಿದ್ದು ಹತ್ತಿಕೊಂಡಿದೆ. ತಕ್ಷಣ ಸ್ಥಳೀಯರು ನೀರು ಸಿಂಪಡಿಸಿ ಸರಿ ಮಾಡಿದ್ದಾರೆಂದು ತಿಳಿದು ಬಂದಿದೆ.