Latestಸುಳ್ಯ

ಸುಳ್ಯ:ಅಡಕೆ ಮರವನ್ನು ಮನೆ ಮೇಲೆ ಉರುಳಿಸಿದ ಕಾಡಾನೆ..!ಮನೆ ಮೇಲ್ಛಾವಣಿಗೆ ಹಾನಿ

584

ನ್ಯೂಸ್‌ ನಾಟೌಟ್:ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕದಲ್ಲಿ ಕಾಡಾನೆ ತೋಟಕ್ಕೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದ ಘಟನೆ ಜೂ.7ರ ರಾತ್ರಿ ಸಂಭವಿಸಿದೆ.ಕಾಡಾನೆ ಅಡಕೆ ಮರ ದೂಡಿ ಹಾಕಿದ್ದು, ಪರಿಣಾಮ ಮನೆಯ ಮೇಲೆ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದೆ.

ಹರಿಹರ ಪಳ್ಳತ್ತಡ್ಕ ಗ್ರಾಮದ ಭೀಮಗುಳಿ ಪುಟ್ಟಣ್ಣ ಗೌಡ ಅವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು, ಅಡಿಕೆ, ಬಾಳೆ ಕೃಷಿಗೆ ಹಾನಿ ಮಾಡಿದೆ.ಈ ವೇಳೆ ಮನೆ ಸಮೀಪದಲ್ಲಿದ್ದ ಅಡಿಕೆ ಮರವನ್ನು ತಳ್ಳಿದಾಗ ಅದು ಮನೆಯ ಮೇಲೆ ಬಿದ್ದು ಮೇಲ್ಛಾವಣಿಗೆ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಸುಳ್ಯ: ಪ್ರೊ ಕಬಡ್ಡಿಯಲ್ಲಿ 'ತೆಲುಗು ಟೈಟಾನ್ಸ್' ಪರ ಮಿಂಚಲಿದೆ 'NMC' ಪ್ರತಿಭೆ, 'KVG ಸ್ಪೋರ್ಟ್ಸ್ ಕ್ಲಬ್'ನಿಂದ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget