Latest

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎಗೆ, ಸಚಿವೆ ಶೋಭಾ ಕರಂದ್ಲಾಜೆ ಮನವಿಗೆ ಅಮಿತ್ ಶಾ ಸ್ಪಂದನೆ

626

ನ್ಯೂಸ್ ನಾಟೌಟ್: ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ದಳ (ಎನ್‌ಐಎ)ಕ್ಕೆ ವಹಿಸಿದೆ. ಈ ಪ್ರಕರಣವನ್ನು ತನಿಖೆಗೆ ವಹಿಸಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಪತ್ರದಲ್ಲಿ ಏನಿತ್ತು..?

ದೇಶ ವಿರೋಧಿ ಶಕ್ತಿಗಳಿಂದ ಸುಹಾಸ್ ಶೆಟ್ಟಿಯ ಹತ್ಯೆಯಾಗಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಳಿ ತಪ್ಪಿದೆ. ಹಿಂದೂ ಪರ ಮಾತನಾಡುವವರು ಹಾಗೂ ಗೋವು ಹತ್ಯೆಗಳನ್ನು ತಡೆಯುವ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಮಾಡಲಾಗುತ್ತಿದೆ. ಕೋಮು ಸಂಘರ್ಷಕ್ಕೆ ಇಲ್ಲಿನ ಕಾಣದ ಶಕ್ತಿಗಳು ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು, ಸುಹಾಸ್ ಶೆಟ್ಟಿಯ ಹತ್ಯೆಯಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮತ್ತೆ ನಡೆಯಬಾರದು, ಈ ನಿಟ್ಟಿನಲ್ಲಿ ತನಿಖೆಯನ್ನು ಎನ್ ಐಎ ಗೆ ವಹಿಸಬೇಕೆಂದು ಶೋಭಾ ಕರಂದ್ಲಾಜೆ ಮನವಿ ಮಾಡಿದ್ದರು.

See also  ಕಲ್ಲುಗುಂಡಿಯಲ್ಲಿ ಕಾನೂನಿನ ಭಯವಿಲ್ಲದ ಕಳ್ಳರ ಹಾವಳಿ, ಮಣ್ಣಿನ ಮಡಿಕೆ, ಕಬ್ಬಿಣ, ಜನರೇಟರ್ ಕದ್ದಾಯ್ತು, ರಿಕ್ಷಾ ಕಳ್ಳತನಕ್ಕೆ ಯತ್ನಿಸಿದ್ದಾಯ್ತು, ಮುಂದೆ ಚಿನ್ನ ಕದಿಯುವ ಮೊದಲು ಬಲೆ ಹೆಣೆಯಬೇಕಿದೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget