ನ್ಯೂಸ್ ನಾಟೌಟ್ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ
ಸಿಕ್ಕಿದ ಚಿನ್ನದ ಸರವನ್ನು ವಾರಸುದಾರರಿಗೆ ಹಸ್ತಾಂತರಿಸಿದ ಘಟನೆ ಬಗ್ಗೆ ವರದಿಯಾಗಿದೆ.
ಭಕ್ತರಾದ ಉಜಿರೆಯ ಸಚಿನ್ ಅವರು ಚಿನ್ನದ ಸರವನ್ನು ಕಳೆದು ಕೊಂಡಿದ್ದರು.ಈ ವೇಳೆ ಶ್ರೀ ದೇಗುಲದ ಭದ್ರತಾ ಸಿಬ್ಬಂದಿಗಳ ಮುಖ್ಯಸ್ಥ ದಾಮೋದರ ನಾಯರ್ ಅವರು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಅವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಶ್ರೀ ದೇಗುಲದಲ್ಲಿ ರವಿವಾರ ಸರತಿಯ ಸಾಲಿನಲ್ಲಿ
ಬೆಂಗಳೂರಿನ ಭಕ್ತ ಶ್ರೀನಿವಾಸಪ್ಪ ಅವರಿಗೆ ಚಿನ್ನದ ಸರ
ದೊರಕಿತ್ತು. ಅದನ್ನು ಅವರು ಶ್ರೀ ದೇಗುಲದ ಭದ್ರತಾ
ಸಿಬಂದಿಗಳ ಮುಖ್ಯಸ್ಥ ದಾಮೋದರ ನಾಯರ್ ಆವರಿಗೆ
ನೀಡಿದರು. ಅನಂತರ ಸರ ದೊರಕಿದ ಬಗ್ಗೆ ಅವರು
ಧ್ವನಿವರ್ಧಕದ ಮೂಲಕ ಹಲವು ಭಾರಿ ಮಾಹಿತಿ ನೀಡಿದ್ದು,
ಈ ಸಂದರ್ಭ ದೇವರ ದರುಶನಕ್ಕಾಗಿ ಸರತಿ ಸಾಲಿನಲ್ಲಿದ್ದ
ಸಚಿನ್ ಅವರಿಗೆ ತನ್ನ ಮಗಳ ಚಿನ್ನದ ಸರ ಬಿದ್ದು ಹೋಗಿದ್ದು
ಗಮನಕ್ಕೆ ಬಂತು ಬಳಿಕ ಅವರು ದಾಮೋದರ್ ಅವರನ್ನು
ಸಂಪರ್ಕಿಸಿ ಸರದ ಗುರುತು ಹೇಳಿ ಠಾಣಾಧಿಕಾರಿಗಳ
ಸಮ್ಮುಖದಲ್ಲಿ ಸರವನ್ನು ಪಡೆದರು.