ಕರಾವಳಿಸುಳ್ಯ

ಎನ್ನೆಂಸಿಯ ಕನ್ನಡ ಭಾಷಾ ವಿದ್ಯಾರ್ಥಿಗಳಿಂದ ಬಂಟ್ವಾಳ ಕಂಬಳಕ್ಕೆ ಅಧ್ಯಯನ ಭೇಟಿ,ಕಾಂತಾರ ನಟ ರಿಷಬ್‌ಗೆ ಕಂಬಳ ತರಬೇತಿ ನೀಡಿದ ಪರಮೇಶ್ವರ್ ಭಟ್ ಉಪಸ್ಥಿತಿ

158

ನ್ಯೂಸ್‌ ನಾಟೌಟ್‌: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಭಾಷೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಬಂಟ್ವಾಳ ಕಂಬಳಕ್ಕೆ ಅಧ್ಯಯನ ಭೇಟಿಗೆ ತೆರಳಿದ್ದರು.ಈ ವೇಳೆ ಕಾಂತಾರಾ ಸಿನಿಮಾದಲ್ಲಿ ರಿಷಬ್ ಶೆಟ್ಟಿಯವರಿಗೆ ಕೋಣಗಳನ್ನು ಓಡಿಸುವ ತರಬೇತಿಯನ್ನು ನೀಡಿದವರು ಕೋಣಗಳನ್ನು ಓಡಿಸಲು ಈ ಕಂಬಳದಲ್ಲಿ ಇದ್ದಿದ್ದು ಗಮನಾರ್ಹವಾಗಿತ್ತು.

ಕಾಲೇಜಿನ ಪ್ರಥಮ ಬಿ ಎ,ದ್ವಿತೀಯ ಬಿ.ಎ. ಮತ್ತು ಬಿ.ಎಸ್ .ಡಬ್ಲ್ಯೂ ವಿದ್ಯಾರ್ಥಿಗಳಿಗೆ ಕೋಟ ಶಿವರಾಮ ಕಾರಂತರ “ಕಂಬಳ”ದ ಕುರಿತಾದ ಪಠ್ಯವನ್ನು ಅಧ್ಯಯನ ಮಾಡಲು ಇರುವುದರಿಂದ ಅದನ್ನು ಪ್ರಾಯೋಗಿಕವಾಗಿ ವೀಕ್ಷಿಸುವ ಸಲುವಾಗಿ ಬಂಟ್ವಾಳಕ್ಕೆಂದು ವಿದ್ಯಾರ್ಥಿಗಳು ತೆರಳಿದ್ದರು. ಮಾರ್ಚ್ 2 ರಂದು ನಡೆದ ಹದಿಮೂರನೇ ವರ್ಷದ ಹೊನಲು ಬೆಳಕಿನ “ಮೂಡೂರು- ಪಡೂರು” ಜೋಡುಕರೆ ಬಯಲು ಕಂಬಳವನ್ನು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು.ಕನ್ನಡ ಸಂಘದ ವತಿಯಿಂದ ಕನ್ನಡ ಸಹಾಯಕ ಪ್ರಾಧ್ಯಾಪಕಿ ಹಾಗೂ ಕನ್ನಡ ಸಂಘದ ಸಂಚಾಲಕಿಯಾದ ಡಾ. ಅನುರಾಧಾ ಕುರುಂಜಿಯವರ ಮಾರ್ಗದರ್ಶನದಲ್ಲಿ ತೆರಳಿದ್ದರು.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಚಿವ ರಮಾನಾಥ್ ರೈ, ಕಂಬಳದ ಸಂಘಟಕರು ಹಾಗೂ ಸುಳ್ಯದ ಕೆಲವು ಮಹನೀಯರು ಉಪಸ್ಥಿತರಿದ್ದರು. ಕಂಬಳದ ಸಂಘಟಕರು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಬಹಳ ಆತ್ಮೀಯವಾಗಿ ಬರಮಾಡಿಕೊಂಡರು.

ಅದೇ ರೀತಿ ಕಂಬಳದ ಸ್ಪರ್ಧೆಯಲ್ಲಿ ಈ ಹಿಂದೆ ಸ್ಪರ್ಧಿಸಿ ವಿಜೇತರಾದ ಕೋಣಗಳ ಮಾಲೀಕರು ಹಾಗೂ ಆ ಕೋಣಗಳನ್ನು ಓಡಿಸುವವರ ಜೊತೆಗೆ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಮೂಲಕ ಮಾಹಿತಿ ಸಂಗ್ರಹಿಸಿದರು.ಈ ಮೂಲಕ ಪುರಾತನವಾದ ಕೃಷಿ ಸಂಬಂಧಿ ಆಚರಣೆಯಾದ ಕಂಬಳ ಕ್ರೀಡೆಗೆ ಇರುವ ಮಹತ್ವವನ್ನು ಕೇಳಿ ತಿಳಿದುಕೊಂಡರು.ಈ ವೇಳೆ ಕಾಂತಾರ ಸಿನಿಮಾದ ನಾಯಕ,ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ ಕೋಣಗಳನ್ನು ಓಡಿಸುವ ತರಬೇತಿಯನ್ನು ನೀಡಿದವರು ಕೋಣಗಳನ್ನು ಓಡಿಸಲು ಈ ಕಂಬಳದಲ್ಲಿ ಇದ್ದಿದ್ದು ವಿಶೇಷ ಆಕರ್ಷಣೆಯಾಗಿತ್ತು.

See also  ಕೆ.ಜಿಗೆ 180 ರೂ., ಕೋಳಿ ಮಾಂಸ ಪ್ರಿಯರಿಗೆ ಶಾಕ್‌
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget