ಕರಾವಳಿಕ್ರೈಂದೇಶ-ವಿದೇಶ

ಚಂಡಮಾರುತದಿಂದಾಗಿ ಮಧ್ಯರಾತ್ರಿಯಿಂದಲೇ ಭೂಕುಸಿತ..! 5.84 ಲಕ್ಷ ಜನರ ಸ್ಥಳಾಂತರ..!

167

ನ್ಯೂಸ್ ನಾಟೌಟ್ : ಒಡಿಶಾದಲ್ಲಿ ಡಾನಾ ಚಂಡಮಾರುತದ ತೀವ್ರತೆ ಹೆಚ್ಚಾಗುತ್ತಿದ್ದು, ಜತೆಗೆ ಭೂಕುಸಿತ ಪ್ರಾರಂಭವಾಗಿದೆ. (ಅ.25) ಇಂದು ಮಧ್ಯಾಹ್ನದವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಡಾನಾ ಚಂಡಮಾರುತದಿಂದಾಗಿ ನಿನ್ನೆ ಮಧ್ಯರಾತ್ರಿಯಿಂದ ಭೂಕುಸಿತ ಪ್ರಾರಂಭವಾಗಿದೆ. ತೀವ್ರ ಚಂಡಮಾರುತ ಮುಂಜಾನೆ 3.30ರ ಸುಮಾರಿಗೆ ಭಿತರ್ಕಾನಿಕಾ ಎಂಬಲ್ಲಿಂದ ಉತ್ತರ-ಈಶಾನ್ಯಕ್ಕೆ 20 ಕಿ.ಮೀ. ದೂರದಲ್ಲಿ ಬೀಸಿದೆ.
ಗಾಳಿಯ ವೇಗ ಗಂಟೆಗೆ 120 ಕಿ.ಮೀ. ತಲುಪುವ ನಿರೀಕ್ಷೆಯಿದೆ ಎಂದು ಭುವನೇಶ್ವರದ ಪ್ರಾದೇಶಿಕ ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಉಮಾಶಂಕರ್ ದಾಸ್ ಹೇಳಿದ್ದಾರೆ.

ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮೂರು ಜಿಲ್ಲೆಗಳ ಮೇಲೆ ಡಾನಾ ಪರಿಣಾಮ ಬೀರುವ ಮುನ್ಸೂಚನೆಯಿರುವುದರಿಂದ ಒಡಿಶಾದ ರಾಜ್ಯ ಸರ್ಕಾರ ಈಗಾಗಲೇ 5.84 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಮೋಹನ್ ಚರಣ್ ಅವರೊಂದಿಗೆ ಕಳೆದ ರಾತ್ರಿ ಮಾತುಕತೆ ನಡೆಸಿ, ಪರಿಹಾರ ಮತ್ತು ರಕ್ಷಣೆ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Click

https://newsnotout.com/2024/10/lawyer-jagadeesh-kannada-news-viral-news-bigboss-house/
https://newsnotout.com/2024/10/traffic-police-kannada-news-viral-news-car-issue-viral-video-shivamogga/
https://newsnotout.com/2024/10/indian-army-attacked-by-kannada-news-viral-news-4-are-nomore/
https://newsnotout.com/2024/10/kannada-news-darshan-and-mobile-case-revealed-viral-nenws-hf/

See also  ರಾಮ ನವಮಿ ಮೆರವಣಿಗೆ ವೇಳೆ ಮೊಟ್ಟೆ ಎಸೆದ ದುಷ್ಕರ್ಮಿಗಳು..! ಪ್ರಕರಣ ದಾಖಲು
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget