ಕೊಡಗು

ಖಾಸಗಿ ಜಮೀನಿನಿಂದ ಶ್ರೀಗಂಧದ ಮರದ ಕಳವಿಗೆ ಯತ್ನ

343

ನ್ಯೂಸ್ ನಾಟೌಟ್ : ಮಡಿಕೇರಿಯ ಮಕ್ಕಂದೂರಿನಲ್ಲಿ ಶ್ರೀಗಂಧದ ಮರವನ್ನು ಕತ್ತರಿಸುತ್ತಿದ್ದ ಆರೋಪಿಗಳ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿ ಪಿ.ಆರ್.ಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 3 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈತ ಇತರೆ ಇಬ್ಬರೊಂದಿಗೆ ಸೇರಿ ಮಕ್ಕಂದೂರಿನ ಖಾಸಗಿ ಜಮೀನಿನಲ್ಲಿದ್ದ ಶ್ರೀಗಂಧದ ಮರವನ್ನು ಕತ್ತರಿಸುತ್ತಿದ್ದಾಗ ದೊರೆತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಇಬ್ಬರು ಪರಾರಿಯಾದರು. ಪ್ರಮುಖ ಆರೋಪಿ ಪ್ರಸಾದ್ ಸಿಕ್ಕಿಬಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಎಂ.ಕೆ.ಮಧುಸೂದನ್, ಡಿಆರ್‌ಎಫ್‌ಒಗಳಾದ ಬಾಬು ರಾಥೋಡ್, ಸಚಿನ್, ಅರಣ್ಯ ರಕ್ಷಕರಾದ ಯು.ಆರ್.ಸಂದೇಶ್‌, ಯತೀಶ್‌, ವಾಸುದೇವ, ಸಿಬ್ಬಂದಿಯಾದ ಅಜಿತ್, ಮೋಹನ್, ಮಹೇಶ್, ಅನಿಲ್, ನವೀನ್ ಇದ್ದರು.

See also  ಮಡಿಕೇರಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡೆಂಗಿ ಜ್ವರ..! ಆತಂಕದಲ್ಲಿ ಕೊಡಗಿನ ಜನತೆ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget