ನ್ಯೂಸ್ ನಾಟೌಟ್: ‘ ಬಯಲು ಆಲಯ’ವೆಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಪುತ್ತೂರಿನ ಉದ್ಯಮಿ ದಿನೇಶ್ ರೈ ಮೂಡಪ್ಪಾಡಿಮೂಲೆ ತಮ್ಮ ಕುಟುಂಬ ಸಮೇತ ಆಗಮಿಸಿ ಭಕ್ತಿಯಿಂದ 75 ಕೆ.ಜಿ ತೂಕದ ತಾಮ್ರದ ಗಂಟೆಯನ್ನು ಸಮರ್ಪಿಸಿದ್ದಾರೆ.
ಜೂ. 11 ರಂದು ಈ ಹರಕೆ ಸಲ್ಲಿಸಲಾಗಿದೆ. ದಿನೇಶ್ ರೈ ಮತ್ತು ಕುಟುಂಬದವರಿಗೆ ದೇವಸ್ಥಾನದ ಅರ್ಚಕರು ಶಾಲು ಹೋದಿಸಿ, ಶ್ರೀ ದೇವರ ಪ್ರಸಾದವನ್ನು ನೀಡಿ ಗೌರವಿಸಿದ್ದಾರೆ.