ನ್ಯೂಸ್ ನಾಟೌಟ್: ಸೌಜನ್ಯ ಹತ್ಯೆಯ ಹಿಂದಿರುವ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಅನ್ನುವ ಕೂಗು ಹೆಚ್ಚುತ್ತಿದೆ. ಈ ನಡುವೆ ಪುತ್ತೂರು ಯುವ ಒಕ್ಕಲಿಗರ ಸೇವಾ ಸಂಘದ ಪದಾಧಿಕಾರಿಗಳು, ಸುಳ್ಯ ಒಕ್ಕಲಿಗರ ಯುವ ಸಂಘದ ಪದಾಧಿಕಾರಿಗಳು, ಕಡಬ ಒಕ್ಕಲಿಗರ ಯುವ ಸಂಘದ ಪದಾಧಿಕಾರಿಗಳು, ವಿಟ್ಲ ಒಕ್ಕಲಿಗರ ಯುವ ಸಂಘದ ಪದಾಧಿಕಾರಿಗಳು ಹಾಗೂ ಮಂಗಳೂರು ಒಕ್ಕಲಿಗರ ಯುವ ಸಂಘದ ಪದಾಧಿಕಾರಿಗಳು ಇದರ ಯುವ ಒಕ್ಕಲಿಗರ ಸೇವಾ ಸಂಘದ ಪದಾಧಿಕಾರಿಗಳು ಸೌಜನ್ಯ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.

ಸೌಜನ್ಯ ಹತ್ಯೆಯಾಗಿ ಇಷ್ಟು ವರ್ಷವಾಗಿದೆ. ಆದರೂ ಆಕೆಗೆ ನ್ಯಾಯವನ್ನು ಒದಗಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒಕ್ಕಲಿಗ ಸೇವಾ ಸಂಘ ಆಗ್ರಹಿಸುತ್ತಿದ್ದು ಸೌಜನ್ಯ ಕುಟುಂಬಸ್ಥರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ. ಒಕ್ಕಲಿಗ ಸಮಾಜ ನಿಮ್ಮೊಂದಿಗೆ ಇದೆ. ನ್ಯಾಯ ಸಿಗುವ ತನಕ ಹೋರಾಟ ನಡೆಸಲಿದ್ದೇವೆ ಎಂದು ಯುವ ಒಕ್ಕಲಿಗರ ಸೇವಾ ಸಂಘದ ಪದಾಧಿಕಾರಿಗಳು ಭರವಸೆ ನೀಡಿದ್ದಾರೆ.