ಕರಾವಳಿಸುಳ್ಯ

ಸೌಜನ್ಯ ಅತ್ಯಾಚಾರ ,ಹತ್ಯೆ ಪ್ರಕರಣ:ಸಿಡಿದೆದ್ದ ಸುಳ್ಯದ ಗೌಡ ಯುವ ಸೇವಾ ಸಂಘ ,ಆ.1ರಂದು ಬೃಹತ್ ವಾಹನ ಜಾಥಾ,ಸರ್ಕಾರಕ್ಕೆ ಮನವಿ,ವಿಡಿಯೋ ವೀಕ್ಷಿಸಿ

242

ನ್ಯೂಸ್ ನಾಟೌಟ್ :ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರುತನಿಖೆ ಮಾಡಿ ಎಂದು ಸೌಜನ್ಯ ಕುಟುಂಬಸ್ಥರು ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿದ್ದರು. ಇದೀಗ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರು ತನಿಖೆಗೆ ಒಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಮಾಡಿ ಎನ್ನುವ ಒತ್ತಾಯಗಳು ಹೆಚ್ಚುತ್ತಿವೆ.

ಇಂದು ಸುಳ್ಯ ಸುದ್ದಿಗೋಷ್ಟಿಯಲ್ಲಿ ಸುಳ್ಯದ ಗೌಡರ ಯುವ ಸೇವಾ ಸಂಘ ಈ ಒತ್ತಾಯವನ್ನು ಮಾಡಿದ್ದು, ಆ.1ರಂದು ಸುಳ್ಯದಲ್ಲಿ ವಾಹನ ಜಾಥಾ ನಡೆಸಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರನ್ನು ಭೇಟಿಯಾಗಿ ಅವರ ಮೂಲಕ ಸರಕಾರವನ್ನು ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

ಆ.1ರಂದು ಸುಳ್ಯದ ವೆಂಕಟರಮಣ ಸೊಸೈಟಿ ಬಳಿಯಿಂದ ಬೆಳಗ್ಗೆ 10 ಗಂಟೆಗೆ ವಾಹನ ಜಾಥಾದ ಮೂಲಕ ಸುಳ್ಯ ನಗರದಲ್ಲಿ ಮೆರವಣಿಗೆಯಲ್ಲಿ ಸಾಗಿ ಸುಳ್ಯ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಿದೆ.

ಈ ಬಗ್ಗೆ ಮಾತನಾಡಿರುವ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ” ಸೌಜನ್ಯ ಎನ್ನುವ ಅಮಾಯಕ ಹುಡುಗಿಗೆ ಅತ್ಯಾಚಾರ ಮಾಡಿ ಕೊಲೆಗೈದ ಪಾಪಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ.ಪ್ರಕರಣ ನಡೆದು 11 ವರ್ಷಗಳಾದರೂ ಆಕೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಅನ್ನೋದು ನಿಜಕ್ಕೂ ಬೇಸರದ ಸಂಗತಿ.ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಸಂತೋಷ್ ರಾವ್ ನಿರಪರಾಧಿಯೆಂದು ನ್ಯಾಯಾಲಯ ಹೇಳಿದೆ.ಹಾಗಾದರೆ ನೈಜ ಆರೋಪಿಗಳನ್ನು ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಒಳಪಡಿಸುವ ಕೆಲಸಗಳಾಗಬೇಕು.ಇದಕ್ಕಾಗಿ ನಾವು ಸರಕಾವನ್ನು ಒತ್ತಾಯವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಘಟನೆ ಬಳಿಕ ಸುಳ್ಯ ಗೌಡ ಸಮಾಜದವರು ಧರ್ಮಸ್ಥಳ ಗ್ರಾಮದಲ್ಲಿರು ಪಾಂಗಾಳದ ಸೌಜನ್ಯಳ ಮನೆಗೆ ಹೋಗಿ ನಾವು ಸಾಂತ್ವನ ಹೇಳುವ ಕೆಲಸ ಮಾಡಿದ್ದೇವೆ. ಆದಿಚುಂಚನ ಗಿರಿ ಮಠದ ಸ್ವಾಮೀಜಿಯವರು ಬಂದಾಗ ಆಕೆಯ ಹೋಗಿ ಸಹಾಯ ನೀಡಿದ್ದೇವೆ.ನ್ಯಾಯ ಸಿಗಲಿಲ್ಲವೆಂದು ನೊಂದ ಪೋಷಕರಿಗೆ ನ್ಯಾಯ ದೊರಕಿಸಿ ಕೊಡುವ ಕರ್ತವ್ಯವನ್ನು ಮಾಡಬೇಕಾಗಿದೆ.ಇದಕ್ಕಾಗಿ ಸುಳ್ಯ ಗೌಡ ಸಂಘ ಒತ್ತಾಯಿಸುತ್ತದೆ ಎಂದು ಹೇಳಿದರು.

ಅನ್ಯಾಯದ ವಿರುದ್ಧ ಧ್ವನಿಯಾಗುವುದೇ ನಮ್ಮ ಸಂಘದ ಮೂಲ ಉದ್ದೇಶವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಸಮಾಜದ ಕುರಿತು ಹರಿದಾಡುತ್ತರುವ ಪೋಸ್ಟ್ ಗಳು ಸತ್ಯಕ್ಕೆ ದೂರವಾದುದು.ನಮ್ಮ ಸಂಘಟನೆ ಬಗ್ಗೆ ತಿಳಿಯದೇ ಮಾತನಾಡುವುದು ತಪ್ಪು.ಸಮಾಜದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ನಮ್ಮ ಸಂಘಟನೆ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಈ ರೀತಿಯ ನೋವು ಮತ್ತೆಂದೂ ಯಾವ ಹೆಣ್ಣು ಮಕ್ಕಳಿಗೆ ಆಗದಿರಲಿ. ಸಮಾಜದಲ್ಲಿ ಇಂತಹ ಘಟನೆಗಳು ಮತ್ತೆಂದೂ ನಡೆಯದಿರಲಿ.ಬೇರೆ ಬೇರೆ ತನಿಖಾ ಸಂಸ್ಥೆಗಳು ನಮ್ಮಲ್ಲಿವೆ. ಅದಕ್ಕೆ ತನಿಖೆಗೆ ನೀಡುವುದಕ್ಕಿಂತ ಕರ್ನಾಟಕ ಪೋಲೀಸರಿಗೆ ಇದರ ತನಿಖೆಯ ಹೊಣೆ ನೀಡಬೇಕು. ಅವರು ಆರೋಪಿಯನ್ನು ಅತೀ ಶೀಘ್ರದಲ್ಲಿ ಬಂಧಿಸುತ್ತಾರೆನ್ನುವ ಭರವಸೆ ನಮಗಿದೆ ಎಂದು ಹೇಳಿದರು.

ಈ ವೇಳೆ ಗೌಡ ಸಂಘದ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ರಾಧಾಕೃಷ್ಣ, ಗೌಡ ಸಂಘದ ಪ್ರಮುಖರಾದ ಎ.ವಿ. ತೀರ್ಥರಾಮ, ಡಾ| ಎನ್.ಎ.ಜ್ಞಾನೇಶ್, ಪಿ.ಎಸ್.ಗಂಗಾಧರ್, ಕೂಸಪ್ಪ ಗೌಡ ಮುಗುಪ್ಪು, ಚಿದಾನಂದ ಕಾಡುಪಂಜ, ಪುರುಷೋತ್ತಮ ಬೊಡ್ಡನಕೊಚ್ಚಿ, ಉಮೇಶ್ ಕೆ.ಎಂ.ಬಿ., ರಮಾನಂದ ಬಾಳೆಕಜೆ, ಶ್ರೀಮತಿ ವಿನುತಾ ಹರೀಶ್ಚಂದ್ರ ಪಾತಿಕಲ್ಲು, ವೀರಪ್ಪ ಗೌಡ ಕಣ್ಕಲ್, ತೀರ್ಥರಾಮ ಅಡ್ಕಬಳೆ, ಜಯರಾಮ ಪಿಂಡಿಬನ, ಗಿರೀಶ್ ಡಿ.ಎಸ್., ಸುರೇಶ್ ಅಮೈ ಇದ್ದರು.

See also  ಮೈ ಜುಮ್ಮೆನಿಸುವ ಪುಟ್ಟ ಬಾಲಕನ ದೈವ ನರ್ತನ!!;ಯಾರಿವನು?ಇಷ್ಟು ಸಣ್ಣ ಪ್ರಾಯಕ್ಕೆ ದೈವ ನರ್ತನ ಹೇಗೆ ಸಾಧ್ಯ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget