Latestಕ್ರೈಂದೇಶ-ವಿದೇಶ

ಉತ್ತರಾಖಂಡದಲ್ಲಿ ತೀವ್ರ ಹಿಮಪಾತಕ್ಕೆ 50ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆ..! 10 ಮಂದಿಯ ರಕ್ಷಣೆ..!

397

ನ್ಯೂಸ್‌ ನಾಟೌಟ್ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಪಾತ ಸಂಭವಿಸಿದ್ದು, ಮಾನಾ ಗ್ರಾಮದಲ್ಲಿ 57 ಕಾರ್ಮಿಕರು‌ ಸಿಲುಕಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.10 ಕಾರ್ಮಿಕರು ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಜಿಲ್ಲಾಡಳಿತ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಮತ್ತು ಗಡಿ ರಸ್ತೆ ಸಂಸ್ಥೆ (BRO) ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆಗೆ ಇಳಿದಿವೆ.

ಫೆ..28 ರ ತಡರಾತ್ರಿ ವರೆಗೆ ಉತ್ತರಾಖಂಡದಲ್ಲಿ ಅತಿ ಹೆಚ್ಚು ಮಳೆ (20 ಸೆಂ.ಮೀ. ವರೆಗೆ) ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಶುಕ್ರವಾರ ಬೆಳಗ್ಗೆ 07:15 ರ ಸುಮಾರಿಗೆ ಮಾನಾ ಮತ್ತು ಬದರಿನಾಥ್ ನಡುವೆ ಇರುವ BRO ಕಾರ್ಮಿಕ ಶಿಬಿರವು ಹಿಮಪಾತಕ್ಕೆ ತುತ್ತಾಯಿತು. ಎಂಟು ಕಂಟೇನರ್‌ ಗಳು ಮತ್ತು ಒಂದು ಶೆಡ್‌ ನಲ್ಲಿ 57 ಕಾರ್ಮಿಕರು ಸಿಲುಕಿದ್ದಾರೆ.

ಇದನ್ನೂ ಓದಿ:ಕೇರಳ: ರೈಲ್ವೆ ಹಳಿ ಮೇಲೆ 3 ಮಹಿಳೆಯರ ಮೃತದೇಹ ಪತ್ತೆ..!ಈ ಬಗ್ಗೆ ಪೊಲೀಸರು ಹೇಳಿದ್ದೇನು..?

ಐಬೆಕ್ಸ್ ಬ್ರಿಗೇಡ್‌ನ 100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ಸೇನೆಯ ಕ್ಷಿಪ್ರ ಕಾರ್ಯ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ವೈದ್ಯರು, ಅಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 11:50 ರ ಹೊತ್ತಿಗೆ, ತಂಡಗಳು ಐದು ಕಂಟೇನರ್‌ ಗಳನ್ನು ಪತ್ತೆಹಚ್ಚಿವೆ. 10 ಮಂದಿಯನ್ನು ರಕ್ಷಿಸಲಾಗಿದೆ. ಅವರ ಪೈಕಿ ನಾಲ್ವರು ಸಿಬ್ಬಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

See also  ಸೈಫ್‌ ಅಲಿ ಖಾನ್‌ ಗೆ ಇರಿದದ್ದು ನಿಜವೇ ಅಥವಾ ನಟನೆಯೇ..ಎಂದು ಪ್ರಶ್ನಿಸಿದ್ದೇಕೆ ಸಚಿವ..? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget