ಕ್ರೈಂವಿಡಿಯೋವೈರಲ್ ನ್ಯೂಸ್

ರೀಲ್ಸ್‌ ಗಾಗಿ ಹಾವನ್ನೇ ಕಚ್ಚಿ ಹಿಡಿದ ಯುವಕ..! ಮಧ್ಯಾಹ್ನವಾಗುತ್ತಿದಂತೆ ಮೃತ್ಯು..! ಇಲ್ಲಿದೆ ವೈರಲ್ ವಿಡಿಯೋ

162

ನ್ಯೂಸ್‌ ನಾಟೌಟ್:‌ ಯುವಕನೋರ್ವ ರೀಲ್ಸ್‌ ಗಾಗಿ ಹುಚ್ಚು ಸಾಹಸ ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಂಡ ಘಟನೆ ತೆಲಂಗಾಣದಲ್ಲಿ ಶುಕ್ರವಾರ(ಸೆ.6ರಂದು) ನಡೆದ್ದು ತಡವಾಗಿ ಬೆಳಕಿಗೆ ಬಂದಿದೆ.

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬನ್ಸವಾಡ ಮಂಡಲದ ದೇಸಾಯಿಪೇಟ್ ಗ್ರಾಮದ ಹಾವಾಡಿಗನೊಬ್ಬನ ಮಗ ಶಿವ ಎಂಬಾತ ಗ್ರಾಮದ ಕಾಲೋನಿಗೆ ಪ್ರವೇಶಿಸಿದ 6 ಅಡಿಯ ನಾಗರ ಹಾವನ್ನು ಹಿಡಿದು ಗ್ರಾಮದಿಂದ ಹೊರಗೆ ಬಿಡಲು ತೆಗೆದುಕೊಂಡು ಹೋಗುವ ವೇಳೆ ಹುಚ್ಚು ಸಾಹಸವನ್ನು ಮಾಡಿದ್ದಾನೆ.
ಹಾವನ್ನು ತೆಗೆದುಕೊಂಡು ಬಾಯಿಯಲ್ಲಿ ಕಚ್ಚಿ ಹಿಡಿದಿದ್ದಾನೆ. ಇದನ್ನು ಅಲ್ಲಿದ್ದವರು ಅಚ್ಚರಿಗೊಂಡು ವಿಡಿಯೋ ಹಾಗೂ ಫೋಟೋ ತೆಗೆದಿದ್ದಾರೆ. ಆದರೆ ಬಾಯಿಯೊಳಗೆ ಹೋದ ಹಾವು ಯುವಕನಿಗೆ ಕಚ್ಚಿದ್ದು, ಇದು ಆತನ ಗಮನಕ್ಕೆ ಬಂದಿರಲಿಲ್ಲ.

ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಶಿವ ಎಂಬ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಆತ ಆದಾಗಲೇ ಹಾವು ಕಡಿತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

Click

https://newsnotout.com/2024/09/operation-conducted-by-fake-doctor-and-boy-nomore-kannada-news/
https://newsnotout.com/2024/09/rajanikanth-jailer-film-villian-kannada-news-airport/
https://newsnotout.com/2024/09/ganapti-pooje-kannada-ddfnews-conflict-for-money-family-issue-karavara/
https://newsnotout.com/2024/09/village-festival-kannada-news-viral-vijayapura-police/
See also  ಸೇತುವೆಯಿಂದ ಕೆರೆಗೆ ಬಿದ್ದ ಕಾಲೇಜು ವಿದ್ಯಾರ್ಥಿನಿ..! ಕೆರೆಗೆ ಧುಮುಕಿ ಆಕೆಯನ್ನು ರಕ್ಷಿಸಿದ 'ಹೋಮ್ ಗಾರ್ಡ್' ಸಿಬ್ಬಂದಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget