Latestಕ್ರೈಂ

ಮುತ್ತಿಕ್ಕಲು ಹೋದ ವ್ಯಕ್ತಿಗೆ ಕಚ್ಚಿದ ವಿಷಕಾರಿ ಹಾವು..! ವ್ಯಕ್ತಿಯ ಸ್ಥಿತಿ ಗಂಭೀರ, ವಿಡಿಯೋ ವೈರಲ್..!

539

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬ ವಿಷಕಾರಿ ಹಾವಿಗೆ ಮುತ್ತಿಕ್ಕಲು ದುಸ್ಸಾಹಸ ಮಾಡಿದ್ದು, ಕಡಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯ ಹೈಬತ್‌ಪುರ ಗ್ರಾಮದಲ್ಲಿ ಶುಕ್ರವಾರ(ಜೂ.13) ಸಂಜೆ ರೀಲ್ ಮಾಡುವ ವೇಳೆ 50 ವರ್ಷದ ರೈತ ಜಿತೇಂದ್ರ ಕುಮಾರ್ ಹಾವನ್ನು ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಚುಂಬಿಸಲು ಪ್ರಯತ್ನಿಸುತ್ತಿದ್ದಾಗ ನಾಲಿಗೆಗೆ ಕಚ್ಚಿದೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಆನ್‌ ಲೈನ್ ವೀಕ್ಷಕರ ಮೆಚ್ಚಿಸುವ ಆಶಯದೊಂದಿಗೆ, ಕುಮಾರ್ ಹಾವಿನೊಂದಿಗೆ ಪೋಸ್ ನೀಡಿದ್ದು, ಈ ವೇಳೆ ಹಲವಾರ ಸಾಹಸವನ್ನು ಚಿತ್ರೀಕರಿಸಿದ್ದಾರೆ. ಸ್ಥಳೀಯರ ಪ್ರಕಾರ, ಕುಮಾರ್ ಮದ್ಯದ ಅಮಲಿನಲ್ಲಿದ್ದು, ಧೂಮಪಾನವನ್ನೂ ಮಾಡುತ್ತಿದ್ದರು.

ಹಾವು ಕಚ್ಚಿದ ನಂತರ ಕುಮಾರ್ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು, ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆಯ ನಂತರ ಮೊರಾದಾಬಾದ್‌ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳ ಬಳಿಕವೂ ಇನ್ನೂ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಮಗುವಿನ ಎದುರೇ ಅಮ್ಮನನ್ನು ಮರಕ್ಕೆ ಕಟ್ಟಿ ಥಳಿಸಿದ ಜನ..! ಗಂಡ ಸಾಲದ ತೀರಿಸದ್ದಕ್ಕೆ ಹೆಂಡತಿಗೆ ಶಿಕ್ಷೆ, ಆರೋಪಿ ಅರೆಸ್ಟ್..!

See also  ಖಲಿಸ್ತಾನ್ ಪ್ರತ್ಯೇಕವಾದಿ ಅಮೃತ್ ಪಾಲ್ ಸಿಂಗ್ ಸೆರೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget