ಕೊಡಗು

ಮಡಿಕೇರಿ: ವಿಷಪೂರಿತ ಹಾವು ಕಡಿದು ಯುವಕ ದುರಂತ ಅಂತ್ಯ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಮಂಥರ್ ಗೌಡ

163

ನ್ಯೂಸ್ ನಾಟೌಟ್ : ಹಾವು ಕಡಿದು ಯುವಕನೋರ್ವ ದಾರುಣ ಅಂತ್ಯ ಕಂಡ ಘಟನೆ ಕೊಡಗಿನ ಕುಶಾಲನಗರ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿ ನಡೆದಿದೆ.ವಿಷಪೂರಿತ ಹಾವು ಕಡಿದ ಹಿನ್ನಲೆ ಕೂಡಲೇ ಯುವಕ ಮೂರ್ಛೆ ತಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ರಕ್ಷಿತ್‌ ಉಸಿರು ಚೆಲ್ಲಿದ ಯುವಕನೆಂದು ತಿಳಿದು ಬಂದಿದೆ. ಮೂಲತಃ ಈತ ಪಿರಿಯಾಪಟ್ಟಣದವನೆಂದು ತಿಳಿದು ಬಂದಿದೆ.ಈತ ಬೆಂಡೆಬೆಟ್ಟ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ.

ಈತ ಜಮೀನಿನ ಕೆಲಸಕ್ಕೆಂದು ಕುಶಾಲನಗರಕ್ಕೆ ಬಂದಿದ್ದ ಎಂದು ಹೇಳಲಾಗಿದ್ದು, ಈ ವೇಳೆ ಜಮೀನು ಕಡೆ ತರಳಿ ಕೆಲಸದಲ್ಲಿ ಮಗ್ನನಾಗಿದ್ದ. ಇದೇ ವೇಳೆ ಯಮನಾಗಿ ಬಂದ ವಿಷಪೂರಿತ ಹಾವು ಕಾಲಿಗೆ ಕಚ್ಚಿದೆ.ಕೂಡಲೇ ಮೂರ್ಛೆ ಬಿದ್ದ ಆತನನ್ನು ಆಸ್ಪತ್ರೆಗೆ ಕರೆಕೊಂಡು ಹೋದರೂ ಮಾರ್ಗ ಮಧ್ಯೆಯಲ್ಲಿಯೇ ಶಾಶ್ವತವಾಗಿ ಕಣ್ಮುಚ್ಚಿದ್ದಾನೆ ಎಂದು ತಿಳಿದು ಬಂದಿದೆ.ವಿಷಯ ತಿಳಿದು ಶಾಸಕ ಮಂತರ್ ಗೌಡ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು.

See also  ಮಡಿಕೇರಿ:ಕುಕ್ಕೆ ಸುಬ್ರಹ್ಮಣ್ಯನ ದರ್ಶನಕ್ಕೆಂದು ಬಸ್ ಹತ್ತಿದವಳ ಕರಿಮಣಿ ಸರ ಎಗರಿಸಿದ ಕಳ್ರು..!,ತಾಳಿ ಕಳ್ಕೊಂಡು ಕಣ್ಣೀರಿಟ್ಟ ಮಹಿಳೆ
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget