ಕರಾವಳಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಸಿಂಹಪ್ರಿಯ ಭೇಟಿ,ನೆಚ್ಚಿನ ನಟ-ನಟಿಯನ್ನು ಕಂಡು ಫೋಟೋ ಕ್ಲಿಕ್ಕಿಸಿಕೊಂಡ ಜನ

ನ್ಯೂಸ್ ನಾಟೌಟ್ : ತುಳುನಾಡಿನ ಪುಣ್ಯ ಕ್ಷೇತ್ರಗಳೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವ ನಟ ಹಾಗೂ ಕಂಚಿನ ಕಂಠದ ವಸಿಷ್ಠ ಸಿಂಹ  ಮತ್ತು ನಟಿ ಹರಿಪ್ರಿಯಾ ಇಂದು ಭೇಟಿ ನೀಡಿದರು.ಈ ಸಂದರ್ಭ ದೇವಳದಲ್ಲಿ ವಸಿಷ್ಠ ಸಿಂಹ ಅವರು ತುಲಾಭಾರ ಸೇವೆ ನೆರವೇರಿಸಿದರು.

ನಂತರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪುನೀತರಾದರು. ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಶಾಲು ಹೊದಿಸಿ ಗೌರವಿಸಿದರು. ಸದಸ್ಯರುಗಳಾದ ಶ್ರೀಮತಿ ಶೋಭಾ ಗಿರಿಧರ್, ಶ್ರೀಮತಿ ವನಜಾ ಭಟ್ ಉಪಸ್ಥಿತರಿದ್ದರು.ಈ ವೇಳೆ ನೂರಾರು ಜನ ನೆರೆದಿದ್ದು, ನೆಚ್ಚಿನ ನಟ ನಟಿಯನ್ನು ಕಂಡು ಫೊಟೋ ಕ್ಲಿಕ್ಕಿಸಿಕೊಂಡರು.

Related posts

‘ಗುಡ್ಡ ಜರಿದ ತಕ್ಷಣ ಇಡೀ ರಸ್ತೆಯನ್ನೇ ಬಂದ್ ಮಾಡೋದಲ್ಲ.., ಸಮಸ್ಯೆಗೆ ಮೊದ್ಲೇ ಪರಿಹಾರ ಮಾಡಬೇಕು’, ಏನಿದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿಕೆ..?

ಕಡಬ: ಕಾರಿಗೆ ಗುದ್ದಿದ ಸ್ಕೂಟರ್, ಸವಾರನಿಗೆ ಗಂಭೀರ ಗಾಯ, ಮಂಗಳೂರಿನ ಆಸ್ಪತ್ರೆಗೆ ದಾಖಲು

ಎಲ್ಲ ಹಿಂದು ಯುವಕರ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಿ: ಶರಣ್ ಪಂಪ್‌ವೆಲ್