Latestಕ್ರೈಂ

ಮೊಬೈಲ್ ಫೋನ್‌ಗಾಗಿ ನಡೆದ ಜಗಳ ಸಾವಿನಲ್ಲಿ ಅಂತ್ಯ: ಬಾವಿಗೆ ಬಿದ್ದು ಅಣ್ಣ-ತಂಗಿ ದುರಂತ ಸಾವು!

832

ನ್ಯೂಸ್‌ ನಾಟೌಟ್: ಮೊಬೈಲ್ ಫೋನ್ ವಿಚಾರವಾಗಿ ನಡೆದ ಜಗಳಕ್ಕೆ ಸಹೋದರ-ಸಹೋದರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ತಮಿಳುನಾಡು ಪುದುಕ್ಕೊಟ್ಟೈನಲ್ಲಿ  ನಡೆದಿದೆ.

ಮನೆಯಲ್ಲಿ ಜಗಳದಿಂದ ಸಹೋದರ ತನ್ನ ಸಹೋದರಿಯ ಫೋನ್ ತೆಗೆದುಕೊಂಡು ಅದನ್ನು ಮುರಿದಿದ್ದಾನೆ.ಈ ವಿಚಾರವಾಗಿ ಬೇಸರಗೊಂಡ ಯುವತಿ ಮನೆ ಹತ್ತಿರವೇ ಇದ್ದ  ಬಾವಿಗೆ ಹಾರಿದ್ದಾಳೆ.ಇದನ್ನು ನೋಡುತ್ತಿದ್ದ ಆಕೆಯ ಸಹೋದರ ಕೂಡ ತನ್ನ ಸಹೋದರಿಯನ್ನು ರಕ್ಷಿಸಲು ಬಾವಿಗೆ ಹಾರಿದ್ದಾನೆ. ಈ ಘಟನೆಯಲ್ಲಿ,ಸಹೋದರ ಮತ್ತು ಸಹೋದರಿ ಇಬ್ಬರೂ ನೀರಿನಲ್ಲಿ ಮುಳುಗಿ ದುರಂತವಾಗಿ ಸಾವನ್ನಪ್ಪಿದರು.ಚಂದ್ರಕುಮಾರ್ ಮತ್ತು ಜೀವಿತಾ ದಂಪತಿ ಮಕ್ಕಳಾಗಿದ್ದು, 18 ವರ್ಷದ ಗಂಡು ಮಗು ಮತ್ತು 11 ವರ್ಷದ ಹೆಣ್ಣು ಮಗಳು.

ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಅಂತ್ಯಕ್ರಿಯೆ ಪೂರ್ಣಗೊಂಡ ನಂತರ ಇಬ್ಬರ ಶವಗಳನ್ನು ಅವರವರ ಊರುಗಳಲ್ಲಿ ಸಮಾಧಿ ಮಾಡಲಾಯಿತು. ಯುವ ಪೀಳಿಗೆಯಲ್ಲಿ ಮೊಬೈಲ್ ಫೋನ್‌ಗಳ ಮೇಲಿನ ಮೋಹ ಯಾವ ರೀತಿ ದಾರಿ ತಪ್ಪಿಸುತ್ತದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.ಇಂತಹ ಅಪಾಯಕಾರಿ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರೋದು ಖೇದಕರ ಸಂಗತಿ.

See also  ಮಹಿಳಾ ಪೊಲೀಸ್ ಅಧಿಕಾರಿಯ ಕೆನ್ನೆಗೆ ಹೊಡೆದ ಯುವಕ..! ಪೊಲೀಸರ ನಿರ್ಲಕ್ಷ್ಯದಿಂದ ರೈತನ ಪ್ರಾಣ ಹೋಗಿದೆ ಎಂದು ಗಾಮಸ್ಥರ ಪ್ರತಿಭಟನೆ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget