ಕ್ರೈಂರಾಜಕೀಯವೈರಲ್ ನ್ಯೂಸ್

ಶ್ರೀರಾಮ ಭಕ್ತ ‘ಹನುಮಂತ’ ಬುಡಕಟ್ಟು ಜನಾಂಗಕ್ಕೆ ಸೇರಿದವ..! ಏನಿದು ಕಾಂಗ್ರೆಸ್ ಶಾಸಕನ ಹೇಳಿಕೆ?

229

ನ್ಯೂಸ್ ನಾಟೌಟ್: ಶ್ರೀರಾಮ ಭಕ್ತ ಹನುಮಂತ ಬುಡಕಟ್ಟು (ಆದಿವಾಸಿ) ಸಮುದಾಯಕ್ಕೆ ಸೇರಿದವನು ಎಂಬ ಹೇಳಿಕೆಯನ್ನು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಉಮಾಂಗ್ ಸಿಂಘಾರ್ ಹೇಳಿಕೆ ನೀಡಿದ್ದಾರೆ.
ಧಾರ್ ಜಿಲ್ಲೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲ ಬರಹಗಾರರು ವಾನರರ ಸೈನ್ಯವಿತ್ತು ಎಂದು ಬರೆದಿದ್ದಾರೆ, ಆದರೆ ಅದು ನಿಜವಲ್ಲ. ರಾಮನ ಶಿಷ್ಯರು ವಾನರರಲ್ಲ. ಅವರೆಲ್ಲ ಕಾಡಿನಲ್ಲಿ ವಾಸಿಸುವ ಆದಿವಾಸಿಗಳು ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಕಾಕೊಡಿಯಾ, ಲೋಕಕಲ್ಯಾಣಕ್ಕಾಗಿ ವಿಷ ಸೇವಿಸಿ ವಿಷಕಂಠನಾದ ಭಗವಾನ್ ಶಿವ ಬುಡಕಟ್ಟು ಸಮುದಾಯಕ್ಕೆ ಸೇರಿದವನು ಎಂಬ ಹೇಳಿಕೆ ನೀಡಿದ್ದರು. ಮಾತ್ರವಲ್ಲ ಅದೇ ಶಾಸಕ ಹನುಮಂತ ಆದಿವಾಸಿ ಜನಾಂಗಕ್ಕೆ ಸೇರಿದವನು ಎಂದು ಹೇಳಿಕೆ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

See also  ನೀರು ಸಂಸ್ಕರಣಾ ಘಟಕದಲ್ಲಿ ಮುಳುಗಿ 3 ಮಕ್ಕಳು ಸಾವು..! ಏನಿದು ಪಾಲಿಕೆ ಅಧಿಕಾರಿಗಳ ಯೆಡವಟ್ಟು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget