Latestಸಿನಿಮಾ

ಕ್ಯಾನ್ಸರ್​ನಿಂದ ಗೆದ್ದ ಶಿವಣ್ಣಗೆ ಪ್ಯಾರೀಸ್​ನಲ್ಲಿ ಬ್ರೈನ್​ ಸರ್ಜರಿ, ಹಾರ್ಟ್​ಗೆ ಸ್ಟೆಂಟ್​! ಸಂದರ್ಶನವೊಂದರಲ್ಲಿ ಶಾಕಿಂಗ್​ ವಿಷ್ಯ ರಿವೀಲ್​..!

1k

ನ್ಯೂಸ್‌ ನಾಟೌಟ್: ನಟ ಶಿವರಾಜ್​ ಕುಮಾರ್​ ಅವರು ಕ್ಯಾನ್ಸರ್​ ಗೆದ್ದು ಬಂದಿರುವ ವಿಷಯ ನಿಮ್ಗೆ ಗೊತ್ತಿದೆ. ಆರು ಗಂಟೆಗಳ ಕಾಲ ನಡೆದಿರುವ ಶಸ್ತ್ರಚಿಕಿತ್ಸೆಯಿಂದ ಕೆಲ ಕಾಲ ರೆಸ್ಟ್​ ತೆಗೆದುಕೊಂಡಿದ್ದ ಶಿವಣ್ಣ ಮತ್ತೆ ಕಮ್​ಬ್ಯಾಕ್​ ಮಾಡಿದ್ದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದುದು ಬಹುತೇಕರಿಗೆ ತಿಳಿದೇ ಇರಲಿಲ್ಲ.ಯಾಕೆಂದರೆ ಸಿನಿಮಾದಲ್ಲಿ ಅಷ್ಟು ಆ್ಯಕ್ಟೀವ್ ಆಗಿದ್ದರು.

ಇದೀಗ ಅವರು ಮಾಧ್ಯಮವೊಂದಕ್ಕೆ ನೀಡಿರುವ ಶಾಕಿಂಗ್​ ಸಂದರ್ಶನವೊಂದು ವೈರಲ್​  ಆಗುತ್ತಿದೆ. ಅದರಲ್ಲಿ ಶಿವರಾಜ್​ ಕುಮಾರ್​ ಅವರು, ನನಗೆ ಮೈತುಂಬಾ ಸಮಸ್ಯೆ ಇದೆ. ನಾನೂ ಮನುಷ್ಯನೇ ಸಮಸ್ಯೆ ಬಂದೇ ಬರುತ್ತದೆ. ಹಾಗೆ ನೋಡುವುದಾದರೆ ಈಗ ಕ್ಯಾನ್ಸರ್​ ಚಿಕಿತ್ಸೆ ಆಗಿದೆ. ಆದರೆ ಅದಕ್ಕೂ ಮೊದಲು ಪ್ಯಾರೀಸ್​ನಲ್ಲಿ ಮೆದುಳಿನ ಸರ್ಜರಿಯಾಗಿತ್ತು ಎಂದಿದ್ದಾರೆ. ಆಸೆಗೊಬ್ಬ ಮೀಸೆಗೊಬ್ಬ ಚಿತ್ರೀಕರಣದ ಸಮಯದಲ್ಲಿ ಕೈಗೆ ಫ್ರಾಕ್ಚರ್​ ಆಗಿತ್ತು. ಕಾಲಿಗೆ ಅದೆಷ್ಟು ಸಲ ಫ್ರಾಕ್ಚರ್ ಆಗಿದ್ಯೋ ಗೊತ್ತಿಲ್ಲ. ಭುಜದಲ್ಲಿಯೂ ಸಮಸ್ಯೆ ಇದೆ. ಬಲ ಭುಜಕ್ಕೆ rotator cuff ನಿಂದ ಬಳಲುತ್ತಿದ್ದೇನೆ. ಹೃದಯಕ್ಕೂ ಸ್ಟೆಂಟ್​ ಹಾಕಿದ್ದಾರೆ ಎನ್ನುವ ಶಾಕಿಂಗ್​ ವಿಷಯವನ್ನು ರಿವೀಲ್​ ಮಾಡಿದ್ದಾರೆ.

 ಶಿವಣ್ಣಗೆ ಇಷ್ಟೆಲ್ಲಾ ಸಮಸ್ಯೆ ಇವೆಯಾ? ಆದರೂ ಯಾವುದನ್ನೂ ತೋರಿಸಿಕೊಳ್ಳಲೇ ಇಲ್ಲ. ಶಿವರಾಜ್​ ಕುಮಾರ್​ ಅವರು ಇಷ್ಟೆಲ್ಲ ಅನಾರೋಗ್ಯವಿದ್ದರೂ ಈ ಹಿಂದೆ ಪತ್ನಿ ಗೀತಾ ಅವರಿಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ.  ಕೆಲ ದಿನಗಳ ಹಿಂದೆ ಇದರ ಬಗ್ಗೆಯೂ ಅವರು ಮಾತನಾಡಿದ್ದರು.   ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ ಶಿವರಾಜ್​ ಕುಮಾರ್​ ಅವರು, ಈ ಬಗ್ಗೆ ಕಮೆಂಟ್​ಗಳು ಬರುವುದನ್ನು ನಾನು ಫೇಸ್​ ಮಾಡುತ್ತೇನೆ. ಏಕೆಂದರೆ ಗೀತಾ ನನ್ನ ಪತ್ನಿ. ಅವರು ಸದಾ ನನಗೆ ಬೆನ್ನೆಲುಬಾಗಿ ನಿಂತವರು. ಅವರಿಗೆ ರಾಜಕೀಯಕ್ಕೆ ಹೋಗಬೇಕು ಎನ್ನುವ ಆಸೆ ಇತ್ತು, ಅದಕ್ಕೆ ನಾನು ಸಪೋರ್ಟ್​ ಮಾಡಿದ್ದೇನೆ ಅಷ್ಟೇ. ನಾಳೆ ಅವರು ಬೇರೆ ಪಾರ್ಟಿಗೆ ಹೋದರೂ ನೀವು ಸಪೋರ್ಟ್​ ಮಾಡುವಿರಾ ಎನ್ನುವ ಪ್ರಶ್ನೆಗೆ, ಶಿವಣ್ಣ ಅವರು ಹೌದು, ಅಷ್ಟೆನೇ.. ನಾನು ಯಾವ ಪಕ್ಷಕ್ಕೆ ಹೋದರೂ ಸಪೋರ್ಟ್​ ಮಾಡುತ್ತೇನೆ ಅಷ್ಟೇ ಎಂದಿದ್ದರು.

See also  ಬೇಕರಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡ್ತಿದ್ದ ಯುವತಿ ದೇಶದ ಪ್ರಧಾನಿ! ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಈ ಯುವತಿ ಯಾರು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget