ಕರಾವಳಿನಮ್ಮ ತುಳುವೇರ್ಸುಳ್ಯ

ತುಳು ಭಾಷೆಯ ನಾಟಕ ‘ಶಿವದೂತೆ ಗುಳಿಗೆ’ ಮಲಯಾಳಂ, ಮರಾಠಿ, ಇಂಗ್ಲಿಷ್‌ನಲ್ಲೂ ಪ್ರದರ್ಶನಕ್ಕೆ ಸಜ್ಜು, ತುಳು ಸಂಸ್ಕೃತಿಗೆ ಮತ್ತೊಂದು ಗೌರವ

129

ನ್ಯೂಸ್ ನಾಟೌಟ್ : ದೇಶದ ವಿವಿಧ ಕಡೆಗಳಲ್ಲಿ ಸಂಚಲನ ಸೃಷ್ಟಿಸಿದ ತುಳು ನಾಟಕ ಶಿವದೂತೆ ಗುಳಿಗೆ ಸದ್ಯದಲ್ಲೇ ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಪ್ರದರ್ಶನ ಕಾಣಲಿದೆ ಎಂದು ನಾಟಕದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರಂಗಸ್ಪಂದನ ಸಂಸ್ಥೆ ಆಯೋಜಿಸಿರುವ ‘ಸಾಂಸ್ಕೃತಿಕ ರಂಗದಿಬ್ಬಣ’ದ ಅಂಗವಾಗಿ ನಗರದ ಪುರಭವನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶಿವದೂತೆ ಗುಳಿಗೆ ಪೌರಾಣಿಕ ತುಳು ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ನಾಟಕದ ಮಲಯಾಳಂ ಆವೃತ್ತಿ ದುಬೈಯಲ್ಲಿ, ನಂತರ ಪಾಲಕ್ಕಾಡ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

ಇಂಗ್ಲಿಷ್‌ನಲ್ಲಿ ನಾಟಕ ಸಿದ್ಧಗೊಳ್ಳುತ್ತಿದ್ದು ಮರಾಠಿಗೂ ಅನುವಾದ ಆಗುತ್ತಿದೆ ಎಂದು ಅವರು ವಿವರಿಸಿದರು. ರಂಗಕರ್ಮಿ, ಚಿತ್ರ ನಟ ಕಾಸರಗೋಡು ಚಿನ್ನಾ ಮಾತನಾಡಿ ರಂಗಸ್ಪಂದನದ ಮೂಲಕ ವಿ.ಜಿ.ಪಾಲ್ ಅವರು ತುಳು ರಂಗಭೂಮಿಗೆ ಗೌರವ ತಂದುಕೊಟ್ಟಿದ್ದಾರೆ. ಅವರು ರಂಗಭೂಮಿಯ ಆಸ್ತಿ ಎಂದು ಅಭಿಪ್ರಾಯಪಟ್ಟರು. ಒಳ್ಳೆಯ ಕೆಲಸಗಳಿಗೆ ರಂಗಭೂಮಿಯಲ್ಲಿ ಗೌರವ ಸಿಕ್ಕಿಯೇ ಸಿಗುತ್ತದೆ. ಶಿವದೂತೆ ಗುಳಿಗೆ ನಾಟಕ ಜಗತ್ತಿನಾದ್ಯಂತ ಹೆಸರು ಗಳಿಸಿದ್ದು ಇದರ ಶ್ರೇಯ ವಿಜಯಕುಮಾರ್ ಕೊಡಿಯಾಲ್‌ ಬೈಲ್ ಅವರಿಗೆ ಸಲ್ಲಬೇಕು ಎಂದು ಹೇಳಿದರು.

ಕಾಂತಾರ ಚಲನಚಿತ್ರದ ಪ್ರಭಾವದಿಂದ ಅನೇಕರಿಗೆ ಸಿನಿಮಾ ಬಗ್ಗೆ ಆಸಕ್ತಿ ಮೂಡಿದೆ. ಅದೇ ರೀತಿ ಶಿವದೂತೆ ಗುಳಿಗೆ ನಾಟಕ‌ವು ರಂಗಭೂಮಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು ನಾಟಕಗಳ ಬಗ್ಗೆ ಆಸಕ್ತಿ ಮೂಲು ನೆರವಾಗಿದೆ. ಕರಾವಳಿಯ ದೈವಗಳ ಕುರಿತು ಇಂಥ ನಾಟಕಗಳು ಇನ್ನಷ್ಟು ಪ್ರದರ್ಶನಗೊಳ್ಳಲಿ ಎಂದು ಕಟೀಲು ಕ್ಷೇತ್ರದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಆಶಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧ್ಯಕ್ಷ ಪದ್ಮರಾಜ್ ಆರ್, ಪತ್ರಿಕೋದ್ಯಮಿ ಶಿವಚರಣ್ ಶೆಟ್ಟಿ, ಎಸಿಪಿ ಮಹೇಶ್, ಕೇರಳ ಸಮಾಜಂನ ಟಿ.ಕೆ.ರಾಜು ಮತ್ತು ರಂಗಸ್ಪಂದನದ ಸಂಚಾಲಕ ವಿ.ಜಿ.ಪಾಲ್ ಇದ್ದರು. ಪ್ರಿಯಾ ಹರೀಶ್ ನಿರೂಪಿಸಿದರು.

See also  ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಅದ್ದೂರಿ ರೋಡ್‌ ಶೋ:ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸ ದಂತೆ ನ.ಪಂ.ಅಧ್ಯಕ್ಷ ಮನವಿ
  Ad Widget   Ad Widget   Ad Widget   Ad Widget   Ad Widget   Ad Widget