ಕರಾವಳಿ

ಪಾಠ ಹೇಳಿಕೊಡುವ ಶಿಕ್ಷಕನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ವಿಶೇಷ ತರಗತಿ ನೆಪದಲ್ಲಿ ಶಾಲೆಗೆ ಕರೆಯಿಸಿ ಕೃತ್ಯ

125

ನ್ಯೂಸ್‌ ನಾಟೌಟ್‌:  ವಿದ್ಯಾರ್ಥಿಗಳಿಗೆ ಪಾಠ ಮಾಬೇಕಾದ ಶಿಕ್ಷಕನೇ ಶಾಲೆಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.ವಿದ್ಯಾರ್ಥಿಗಳಿಗೆ ಪಾಠ ಮಾಡಿ ಬುದ್ಧಿವಂತ ಮಕ್ಕಳನ್ನು ಸಮಾಜಕ್ಕೆ ಕೊಡಬೇಕಾದ ಶಿಕ್ಷಕಕನಿಂದಲೇ ಈ ಕೃತ್ಯವಾಗಿದೆಯೆಂದರೆ ನಿಜಕ್ಕೂ ಖೇದಕರ ಸಂಗತಿ.ಈ ಘಟನೆ ದ.ಕ ಜಿಲ್ಲೆಯ ಕಲ್ಲಮುಂಡ್ಕೂರು ಪ್ರೌಢಶಾಲೆಯಲ್ಲಿ ಬೆಳಕಿಗೆ ಬಂದಿದೆ.

ಈ ಕುರಿತು ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.ಈ ಹೈಸ್ಕೂಲ್‌ನಲ್ಲಿ 73 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಬೆಳ್ತಂಗಡಿ ಮೂಲದ ಶಿಕ್ಷಕ ಗುರುವ ಎಂಬುವವರು ಕಳೆದ ತಿಂಗಳು ವಿಶೇಷ ತರಗತಿ ನಡೆಸುವ ಕಾರಣ ನೀಡಿ 10ನೇ ತರಗತಿಯ 26 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿ ಮತ್ತು ಓರ್ವ ವಿದ್ಯಾರ್ಥಿನಿಯನ್ನು ಶಾಲೆಗೆ ಕರೆಸಿದ್ದರು ಎಂದು ಹೇಳಲಾಗಿದೆ. ಶಾಲೆಯ ಜಗುಲಿಯಲ್ಲಿ ಕುಳ್ಳಿರಿಸಿ ತಿಂಡಿ ನೀಡಿ, ಒಬ್ಬಂಟಿ ವಿದ್ಯಾರ್ಥಿನಿಯನ್ನು ಕೊಠಡಿಗೆ ಕರೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ಜಗಲಿಯಲ್ಲಿ ಕುಳಿತಿದ್ದ ಮಕ್ಕಳು ಬಾಗಿಲಿನ ಸಂದಿಯಲ್ಲಿ ನೋಡುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೆ ಶಿಕ್ಷಕ ಹೊರಬಂದು ವಿದ್ಯಾರ್ಥಿಗಳನ್ನು ನೀವು ಶೌಚಗೃಹಕ್ಕೆ ಹೋಗಿ ಬನ್ನಿ ಎಂದು ತಿಳಿಸಿದ್ದಾನೆ. ಆ ಸಂದರ್ಭ ವಿದ್ಯಾರ್ಥಿನಿ ಭಯದಿಂದ ವಿದ್ಯಾರ್ಥಿಗಳನ್ನು ಹೋಗದಂತೆ ವಿನಂತಿಸಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಶಿಕ್ಷಕ ಸದಾನಂದ ಪೂಜಾರಿ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ವಿದ್ಯಾರ್ಥಿನಿಯನ್ನು ಶಿಕ್ಷಕರ ಕೊಠಡಿಯೊಳಗೆ ಕರೆದುಕೊಂಡು ಹೋದ ಸಂದರ್ಭ ಹೊರಭಾಗದಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಚಪ್ಪಲಿಯನ್ನು ಜಗಲಿಗೆ ಬಡಿದು ಶಿಕ್ಷಕ ಹೊರಬರುವಂತೆ ನೋಡಿಕೊಂಡಿದ್ದಾರೆ.

ಮಂಗಳವಾರ ಶಾಲೆಗೆ ಚೈಲ್ಡ್‌ಲೈನ್‌ನ ನಂದಾ ಪಾಯಸ್, ಸಾಮಾಜಿಕ ಕಾರ್ಯಕರ್ತೆ ಪದ್ಮಿನಿ ವಸಂತ್, ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಶೆಟ್ಟಿ ಮತ್ತು ಸದಸ್ಯರು, ಮಂಗಳೂರು ಮಹಿಳಾ ಠಾಣೆ ಸಿಬ್ಬಂದಿ ಭೇಟಿ ನೀಡಿದ್ದು ಮಕ್ಕಳಿಂದ ಹೇಳಿಕೆ ಪಡೆದಿದ್ದಾರೆ. 

See also  ಹಿಂದೂ ಕಾರ್ಯಕರ್ತನಿಗೆ ಚಾಕು ಇರಿತ, ಗಂಭೀರ ಗಾಯ
  Ad Widget   Ad Widget     Ad Widget   Ad Widget   Ad Widget   Ad Widget