ಉಡುಪಿಕರಾವಳಿಕ್ರೈಂಜೀವನ ಶೈಲಿ/ಆರೋಗ್ಯ

ಶಾಲಾ ಬಸ್ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ..! 65 ಮಕ್ಕಳು ಪಾರಾದದ್ದೇಗೆ..?

164
Photo cr: Vartha Bharati

ನ್ಯೂಸ್ ನಾಟೌಟ್: ಶಾಲಾ ಬಸ್ ಚಾಲಕನಿಗೆ ಬಸ್ ಚಲಾಯಿಸುತ್ತಿರುವಾಗಲೇ ಲಘು ಹೃದಯಾಘಾತವಾಗಿದ ಘಟನೆ ಉಡುಪಿಯ ಪೆರಂಪಳ್ಳಿ ಎಂಬಲ್ಲಿ ಇಂದು (ಜೂನ್.5) ಸಂಜೆ ನಡೆದಿದೆ. ಹೃದಯಾಘಾತಕ್ಕೆ ಒಳಗಾದ ಚಾಲಕನ ಸಮಯ ಪ್ರಜ್ಞೆಯಿಂದ ಹಲವು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ರಹ್ಮಾವರದ ಖಾಸಗಿ ಶಾಲೆಯೊಂದರ ವಾಹನವು ಸುಮಾರು 65 ಮಕ್ಕಳನ್ನು ಕರೆದುಕೊಂಡು ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ಹೋಗುತ್ತಿತ್ತು.

ದಾರಿ ಮಧ್ಯೆ ಐವರು ಮಕ್ಕಳ ಇಳಿಸಿದ ಬಸ್, ಪೆರಪಂಳ್ಳಿ ಬಳಿ ಹೋಗುತ್ತಿದ್ದಾಗ ಚಾಲಕ ಆಲ್ವಿನ್ ಡಿಸೋಜ ಅವರಿಗೆ ಲಘು ಹೃದಯಾಘಾತ ಸಂಭವಿಸಿದೆ. ಕೂಡಲೇ ಎಚ್ಚೆತ್ತ ಚಾಲಕ ಬಸ್ಸನ್ನು ರಸ್ತೆಯ ಬದಿಯ ಚರಂಡಿ ಬದಿಯ ಪೊದೆಗೆ ತಾಕುವಂತೆ ನಿಲ್ಲಿಸಿದ್ದಾರೆ. ಇದರಿಂದ ಕೆಲವು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ. ತೀವ್ರವಾಗಿ ಅಸ್ವಸ್ಥರಾಗಿರುವ ಚಾಲಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Click 👇

https://newsnotout.com/2024/06/congress-meeting-and-govt-forming-issue
https://newsnotout.com/2024/06/narendra-modi-and-oath-taking-date-fix
https://newsnotout.com/2024/06/meloni-modi-wish-by-meloni-itali-to-narendra-modi
See also  ನರೇಗಾದಲ್ಲಿ ಹಣ ಪಡೆಯಲು ಸೀರೆಯುಟ್ಟು ಫೋಟೋ ಅಪ್ಲೋಡ್ ಮಾಡಿದ ಯುವಕ..! ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿರುವ ಆರೋಪ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget