ಕರಾವಳಿ

ಹಾರೆ ಹಿಡಿದು ರಸ್ತೆ ಸರಿಪಡಿಸಿದ ಇಬ್ಬರು ಶಾಲಾ ಮಕ್ಕಳು, ಫೋಟೋ ವೈರಲ್

790

ಬೆಳ್ಳಾರೆ: ತಮಿಳುನಾಡಿನಲ್ಲಿ ಮಕ್ಕಳಿಬ್ಬರು ಸೇರಿಕೊಂಡು ಶಾಲೆಗೆ ಸಮೀಪವಿದ್ದ ಮದ್ಯದ ಅಂಗಡಿಯನ್ನು ಮುಚ್ಚಿಸಿ ಸುದ್ದಿಯಾಗಿದ್ದರು. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಮಂಡೇಪು ಎಂಬಲ್ಲಿ ಶಾಲಾ ಮಕ್ಕಳಿಬ್ಬರು ಸದ್ದು ಮಾಡಿದ್ದಾರೆ. ಶಾಲೆಗೆ ತೆರಳುವ ಹಾದಿಯ ಹದಗೆಟ್ಟ ರಸ್ತೆಯನ್ನು ತಾವೇ ಹಾರೆ ಹಿಡಿದು ಸರಿಪಡಿಸಿದ್ದಾರೆ. ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿದೆ.

ಏನಿದು ಘಟನೆ?

ಸೋಮವಾರ ಶಾಲೆ ಆರಂಭವಾಗಿದೆ. ಎಲ್ಲ ಮಕ್ಕಳು ಸರಿ ಸುಮಾರು ಎರಡು ವರ್ಷದ ನಂತರ ಶಾಲೆಗಳಿಗೆ ತೆರಳುತ್ತಿದ್ದಾರೆ. ಹೀಗೆ ಖುಷಿಯಲ್ಲಿದ್ದ ಮಕ್ಕಳಿಗೆ ನಿರಾಸೆ ಕಾದಿತ್ತು. ಕೆಸರು ತುಂಬಿದ ಈ ರಸ್ತೆಯಲ್ಲಿ ನಾವು ಹೋಗುವುದಾದರೂ ಹೇಗೆ ಎಂಬ ಚಿಂತೆ ಈ ಪುಟಾಣಿಗಳಿಗೆ ಕಾಡಿತು. ಯಾರಿಗೂ ಏನೂ ಹೇಳಿ ಪ್ರಯೋಜನವಿಲ್ಲ ಎಂದು ನಿರ್ಧರಿಸಿ   ತಾವೆ ಹಾರೆ ಹಿಡಿದು ಸರಿಪಡಿಸುವ ಕೆಲಸ ಮಾಡಿದ್ದಾರೆ. ಈ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ ಹಾಗೆ ಈ ಕೆಲಸವನ್ನು ಮಾಡಿದ್ದು ಸಂತೋಷ್ ಮತ್ತು ಕೇಶವ ಎಂಬವರ ಮಕ್ಕಳಾದ 2 ನೇ ತರಗತಿಯ ವಲ್ಲೀಶ ರಾಮ ಮತ್ತು ತನ್ವಿ ಹಾರೆ ಹಿಡಿದು ರಸ್ತೆಯಲ್ಲಿ ತುಂಬಿರುವ ಕೆಸರು ಬದಿಗೆ ಸರಿಸಿ ಗುಂಡಿಯಲ್ಲಿ ತುಂಬಿಕೊಂಡಿರುವ ನೀರನ್ನು ಹೊರಗೆ ಬಿಡುವ ಪ್ರಯತ್ನ ಮಾಡಿದ್ದಾರೆ. ಈ ರಸ್ತೆಯ ಮೇಲೆ ಈ ಪುಟಾಣಿಗಳಿಗಿರುವ ಪ್ರೀತಿ, ಅಭಿವೃದ್ಧಿಯ ಹೊಣೆ ಹೊರಬೇಕಾದ ದೊಡ್ಡವರಿಗೆ ಯಾಕಿಲ್ಲ ಎಂಬ ಪ್ರಶ್ನೆ ಮೂಡಿದೆ.

See also  ಕದ್ರಿಶ್ರೀಮಂಜುನಾಥ ದೇವಸ್ಥಾನ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ವಿರೋಧ, ಬ್ಯಾನರ್ ತೆರವುಗೊಳಿಸಿದ ಪೊಲೀಸರು..!
  Ad Widget   Ad Widget     Ad Widget   Ad Widget   Ad Widget   Ad Widget