ನ್ಯೂಸ್ ನಾಟೌಟ್: 1 ನೇ ತರಗತಿ ವಿದ್ಯಾರ್ಥಿನಿ ಸಮೇತ ಶಾಲಾ ಕೊಠಡಿಗೆ ಬೀಗ ಹಾಕಿಕೊಂಡು ಹೋದ ಘಟನೆ ಲಕ್ನೋದ ಮೋಹನ್ಲಾಲ್ಗಂಜ್ ಬ್ಲಾಕ್ನ ಸಿಸಂಡಿ ಪ್ರದೇಶದ ಶಾಲೆಯಲ್ಲಿ ನಡೆದಿದೆ.
ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, 15 ದಿನಗಳಲ್ಲಿ ತನಿಖಾ ವರದಿಯನ್ನು ಬಿಎಸ್ಎಗೆ ನೀಡುವಂತೆ ಉಸ್ತುವಾರಿ ಅಧಿಕಾರಿಗೆ ಸೂಚಿಸಲಾಗಿದೆ ಮತ್ತು ಈ ಘಟನೆ ಸೆ.೨೭ ರಂದು ನಡೆದಿದೆ.
1 ನೇ ತರಗತಿಯ ವಿದ್ಯಾರ್ಥಿನಿ ಮಹಾಕ್ ಶಾಲೆ ಮುಗಿದಾಗ ತನ್ನ ತರಗತಿಯಲ್ಲಿ ಮಲಗಿದ್ದಳು. ಶಿಕ್ಷಕರು ಮತ್ತು ಗೌರವ ಶಿಕ್ಷಕರು ಆಕೆಯನ್ನು ಗಮನಿಸದೆ ಶಾಲೆಯ ಗೇಟ್ಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ಗಣೇಶ ಮೂರ್ತಿಯ ವಿಸರ್ಜನೆಗೆ ಸ್ಥಳೀಯರು ಮೆರವಣಿಗೆ ನಡೆಸುತ್ತಿದ್ದಾಗ ಡೋಲು ಬಾರಿಸಿದಾಗ ಸದ್ದಿಗೆ ಆಕೆ ಎಚ್ಚರಗೊಂಡು, ಕಿಟಕಿಯ ಬಳಿ ಓಡಿ ಸಹಾಯಕ್ಕಾಗಿ ಅಳುತ್ತಾಳೆ.
ದಾರಿಹೋಕರು ಮಗುವಿನ ಅಳುವನ್ನು ಕೇಳಿ ಶಾಲೆಗೆ ಬಂದು ಶಿಕ್ಷಕರನ್ನು ಗೇಟ್ ತೆರೆಯಲು ಕರೆಸಿ, “ಸ್ಥಳೀಯರು ಬಾಲಕಿಯನ್ನು ಗುರುತಿಸಿದರು ಮತ್ತು ಶಿಕ್ಷಾ ಮಿತ್ರ ಸಹಾಯವಾಣಿಗೆ ಮಾಹಿತಿ ನೀಡಿದ್ದು, ಅವರು ಬಂದು ಬೀಗವನ್ನು ತೆರೆದ ನಂತರ ಹುಡುಗಿಯನ್ನು ಮನೆಗೆ ಕಳುಹಿಸಲಾಗಿದೆ.
ಶಾಲಾ ಶಿಕ್ಷಕರು ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ತೋರಿದ್ದು ಮತ್ತು ಶಾಲೆಯಿಂದ ಹೊರಡುವ ಮೊದಲು ವಿದ್ಯಾರ್ಥಿಗಳ ಲೆಕ್ಕವನ್ನು ಇಡದಿದ್ದಕ್ಕಾಗಿ ಶಿಕ್ಷಕಿ ಪ್ರಮೀಳಾ ಅವಸ್ತಿ ಎಂಬವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.