ದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಮರುಭೂಮಿಯಲ್ಲಿ ಬೋರ್‌ ವೆಲ್‌ ಕೊರೆಯುತ್ತಿದ್ದ ವೇಳೆ ಅಚಾನಕ್ಕಾಗಿ ಸೃಷ್ಟಿಯಾದ ನದಿ..! ಪುರಾಣದ ಸರಸ್ವತಿ ನದಿಯ ಮರು ಉಗಮ ಎನ್ನುತ್ತಿದ್ದಾರೆ ಜನ..! ಇಲ್ಲಿದೆ ವಿಡಿಯೋ

176

ನ್ಯೂಸ್ ನಾಟೌಟ್ : ಕೃಷಿ ಭೂಮಿಗೆ ನೀರುಣಿಸಲು ರೈತರೊಬ್ಬರು ಬೋರ್‌ ವೆಲ್‌ ಕೊರೆಸಿದ ವೇಳೆ, ಅದರಿಂದ ನದಿಯಂತೆ ನೀರು ಉಕ್ಕಿ ಹರಿದ ಅಚ್ಚರಿಯ ಘಟನೆ ರಾಜಸ್ಥಾನದ ಮರುಭೂಮಿ ಪ್ರದೇಶವಾದ ಜೈಸಲ್ಮೇರ್‌ ನಲ್ಲಿ ನಡೆದಿದೆ. ಬೋರ್‌ ವೆಲ್‌ ಸುತ್ತಲೂ ನೀರು ನಿಂತು ಕೆರೆ ನಿರ್ಮಾಣವಾಗಿದೆ. ಇದನ್ನು ನೋಡಿ 5000 ವರ್ಷಗಳ ಹಿಂದೆ ಭೂಸಮಾಧಿ ಆಯ್ತು ಎನ್ನಲಾದ, ಪುರಾಣಗಳಲ್ಲಿ ಬರುವ ಸರಸ್ವತಿ ನದಿ ಮತ್ತೆ ಉಗಮವಾಗಿದೆ ಎಂಬೆಲ್ಲಾ ಸುದ್ದಿ ಹರಡುತ್ತಿದೆ.

ಜಸಲ್ಮೇರ್‌ ನ ಮೋಹನ್‌ ಗಢ ಕಾಲುವೆ ಪ್ರದೇಶದಲ್ಲಿ ರೈತರೊಬ್ಬರು ಬೋರ್‌ ಕೊರೆಸಿದ ವೇಳೆ ಅದರೊಳಗಿಂದ ಭಾರೀ ಪ್ರಮಾಣದ ಅನಿಲ ಮತ್ತು ನೀರು ಹೊರಚಿಮ್ಮಿದೆ. ಈ ಸದ್ದು ಕೇಳಿ ರೈತರು ಆತಂಕಗೊಂಡರೂ, ಬಳಿಕ ನೀರು ಹರಿದು ಬಂದ ರೀತಿ ನೋಡಿ ಆತಂಕ ಮತ್ತು ಸಂಭ್ರಮ ಪಟ್ಟಿದ್ದಾರೆ.

ಅಂತರ್ಜಲ ವಿಜ್ಞಾನಿ ಡಾ. ನಾರಾಯಣ ದಾಸ್‌ ಪ್ರಕಾರ, ನೀರು ಮೇಲ್ಮುಖವಾಗಿ ಚಲಿಸುವಾಗ ಉಂಟಾದ ಒತ್ತಡದಿಂದ ಹೀಗಾಗಿರಬಹುದು ಎಂದಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಆ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್‌ 163 ಹೇರಲಾಗಿದ್ದು, 500 ಮೀಟರ್‌ ಅಂತರದಲ್ಲಿ ಯಾರೂ ಸುಳಿಯದಂತೆ ಸೂಚಿಸಲಾಗಿದೆ.

ಋಗ್ವೇದ ಸೇರಿ ಹಲವು ಪುರಾಣಗಳಲ್ಲಿ ಈ ಪ್ರದೇಶದಲ್ಲಿ ಸರಸ್ವತಿ ನದಿಯ ಉಲ್ಲೇಖವಿದೆ. ಇದು ಸುಮಾರು 5000 ವರ್ಷಗಳ ಹಿಂದೆ ಹವಾಮಾನ ಹಾಗೂ ಟೆಕ್ಟಾನಿಕ್‌ ಪದರಗಳ ಚಲನೆಯಿಂದ ಒಣಗಿಹೋಗಿರಬಹುದು ಎಂಬ ಎಂದು ನಂಬಲಾಗಿತ್ತು. ಇದು ಈ ಮತ್ತೆ ಉದ್ಭವವಾಗಿದೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.

See also  ಪರೀಕ್ಷೆಯಲ್ಲಿ ಅನುತ್ತೀರ್ಣನಾದದ್ದಕ್ಕೆ ಕಾಲೇಜು ಬದಲಾಯಿಸಲು ಹೇಳಿದ ಪೋಷಕರನ್ನೇ ಹತ್ಯೆಗೈದ ವಿದ್ಯಾರ್ಥಿ..! ಪೊಲೀಸ್ ಕಂಟ್ರೋಲ್ ರೂಂಗೆ ಮನೆಯೊಂದರಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಕರೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget