ಕರಾವಳಿಸುಳ್ಯ

ಸಂಪಾಜೆ: ಬೆಳಗ್ಗೆ ನಗುನಗುತ್ತಲೇ ಮಾತನಾಡಿದ್ದ ವ್ಯಕ್ತಿ ಕತ್ತಲಾಗುವಾಗ ಇನ್ನಿಲ್ಲ..! ಹೃದಯಾಘಾತದಿಂದ ಟೈಲರ್ ಹಠಾತ್ ಸಾವು

ನ್ಯೂಸ್ ನಾಟೌಟ್: ಮನುಷ್ಯನ ಜೀವನ ತುಂಬಾ ಸಣ್ಣದು. ನೀರಿನ ಮೇಲಿರುವ ಗುಳ್ಳೆಯಂತೆ. ನಾಲ್ಕು ದಿನದ ಈ ಜೀವನ ಯಾತ್ರೆಯೂ ಯಾವ ಕ್ಷಣದಲ್ಲೂ ಕೊನೆಗೊಳ್ಳಬಹುದು.

ಹೌದು, ಇತ್ತೀಚಿನ ದಿನಗಳಲ್ಲಿ ಮರಣ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಹೃದಯಾಘಾತದಿಂದ ಸಾಯುತ್ತಿರುವ ಜನರ ಸಂಖ್ಯೆಯೇ ಅಧಿಕವಾಗುತ್ತಿದೆ. ಅಂತೆಯೇ ಸಂಪಾಜೆಯ ಕಲ್ಲುಗುಂಡಿಯಲ್ಲಿ ಟೈಲರ್ ಆಗಿದ್ದ ವ್ಯಕ್ತಿಯೊಬ್ಬರು ಕೂಡ ದಿಢೀರ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಅಬಿರ ನಾಗೇಶ್ ಮೃತಪಟ್ಟವರು. ಅವರು ಕಳೆದ ಮೂವತ್ತು ವರ್ಷಗಳಿಂದ ಕಲ್ಲುಗುಂಡಿಯ ಬೊಳುಗಲ್ಲು ಪದ್ಮಯ್ಯ ಗೌಡ ಅವರ ಬಟ್ಟೆ ಅಂಗಡಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಲತಾ, ಪುತ್ರ ಧನುಷ್ , ಪುತ್ರಿ ಜ್ಯೋತಿಯನ್ನು ಅಗಲಿದ್ದಾರೆ. ಎಲ್ಲರೊಂದಿಗೂ ನಗುತ್ತಾ ಬದುಕಿದ್ದ ವ್ಯಕ್ತಿ ದಿಢೀರ್ ಸಾವಿಗೊಳಗಾಗಿದ್ದು ಅಚ್ಚರಿ ತಂದಿದೆ. ಈ ಸಾವು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪದ್ಮಯ್ಯ ಗೌಡರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.

Related posts

ಪುತ್ತೂರು : ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ರಾಜ್ಯ ಮಾನವ ಹಕ್ಕು ಆಯೋಗದಿಂದ ದೂರು ದಾಖಲು

24 ಗಂಟೆಯೊಳಗೆ ನಿವೃತ್ತಿ ಘೋಷಿಸಿ,ಇಲ್ಲವಾದರೆ ಕ್ರಮ ಎದುರಿಸಲು ಸಿದ್ಧರಾಗಿ ಎಂದು ರಘುಪತಿಗೆ ಭಟ್‌ಗೆ ಬಿಜೆಪಿ ಎಚ್ಚರಿಕೆ..! ಪಕ್ಷಕ್ಕೆ ಮುಜುಗರ ತಂದೊಡ್ಡುವುದು ಸರಿಯಲ್ಲ ಎಂದ ಬಿಜೆಪಿ ಜಿಲ್ಲಾಧ್ಯಕ್ಷ..!

ಹೃದಯಾಘಾತವಾದ ವ್ಯಕ್ತಿಗೆ ತಕ್ಷಣ ಈ ವಸ್ತುವನ್ನು ತಿನ್ನಲು ಕೊಟ್ರೆ ಪ್ರಾಣ ಉಳಿಸಬಹುದು..! ಯಾವುದು ವಸ್ತು? ಏನಿದು ವೈರಲ್ ವಿಡಿಯೋ?