ಕ್ರೈಂ

ಸಂಪಾಜೆ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಎಂಟು ಮಂದಿ ಅರೆಸ್ಟ್..?

518

ಸಂಪಾಜೆ: ಇಲ್ಲಿನ ಚಟ್ಟೆಕಲ್ಲು ಎಂಬಲ್ಲಿ ಅರ್ಚಕ, ಜ್ಯೋತಿಷಿ ಅಂಬರೀಶ್ ಭಟ್ ಅವರ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಹಣ ದೋಚಿದ ದರೋಡೆಕೋರರ ತಂಡದ ಬಗ್ಗೆ ಸಂಪಾಜೆ ಮುಖ್ಯ ರಸ್ತೆಯಲ್ಲಿದ್ದ ಸಿಸಿ ಕ್ಯಾಮರಾ ಭಾರಿ ಸುಳಿವನ್ನು ನೀಡಿದೆ. ಈ ಮೂಲಕ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು ಎಂಟು ಮಂದಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಅನ್ನುವಂತಹ ಮಾಹಿತಿ ನ್ಯೂಸ್ ನಾಟೌಟ್ ಗೆ ಲಭ್ಯವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರ ಬೀಳಬೇಕಿದೆ.

ತನಿಖೆ ದೃಷ್ಟಿಯಿಂದ ಪೊಲೀಸರು ಆರೋಪಿಗಳ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದಾರೆ. ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಅನ್ನುವಂತಹ ಮಾಹಿತಿಯೂ ಇದೆ. ಕಲ್ಲುಗುಂಡಿಯ ಸೊಸೈಟಿಯಲ್ಲಿರುವ ಸಿಸಿ ಕ್ಯಾಮರಾವನ್ನು ಪೊಲೀಸರು ಹಲವು ಸಲ ಪರಿಶೀಲನೆ ನಡೆಸಿ ಆರೋಪಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ದರೋಡೆಯಾದ ದಿನ ಹಗಲಿನ ವೇಳೆ ಟವೆರಾ ಕಾರೊಂದು ಅಂಬರೀಶ್ ಭಟ್ ಅವರ ಮನೆಗೆ ಹೋಗಿತ್ತು. ಅದೇ ದಿನ ರಾತ್ರಿಯೂ ಅದೇ ಕಾರು ಚಟ್ಟೆಕಲ್ಲು ರೋಡಿನಲ್ಲಿ ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎನ್ನಲಾಗಿದೆ.

See also  ವಿಮಾನ ತುರ್ತು ಭೂಸ್ಪರ್ಶ..! ಪ್ರಾಣಾಪಾಯದಿಂದ ಪಾರಾದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget