Latest

ಸಂಪಾಜೆಯ ಬಡ ಕುಟುಂಬದ ಮನೆ ಯಜಮಾನನಿಗೆ ಮೆದುಳಿನ ರಕ್ತಸ್ರಾವ..! ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲು, ಚಿಕಿತ್ಸೆಗೆ ಸಿಗಬಹುದೇ ನಿಮ್ಮ ಸಹಾಯದ ಹಸ್ತ..?

1.8k

ನ್ಯೂಸ್ ನಾಟೌಟ್: ಕೊಡಗು ಸಂಪಾಜೆಯ ಬಡ ಕುಟುಂಬದ ಹಿನ್ನೆಲೆಯುಳ್ಳ ವೆಂಕಟೇಶ್ ಹೊದ್ದೆಟ್ಟಿ ಅವರು ಮೆದುಳು ರಕ್ತಸ್ರಾವದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

 

View this post on Instagram

 

A post shared by News not out (@newsnotout)

ಸದ್ಯ ಫಸ್ಟ್ ನ್ಯುರೋ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಗುಣಮುಖರಾಗಲು ಸುಮಾರು 3 ಲಕ್ಷ ರೂ. ಅಗತ್ಯವಿದ್ದು ಬಡ ಕುಟುಂಬ ಹಣ ಹೊಂದಿಸಲು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಮನೆಗೆ ಆಧಾರಸ್ಥಂಭವಾಗಿದ್ದ ವೆಂಕಟೇಶ್ ಅನಾರೋಗ್ಯದಿಂದ ಕುಟುಂಬ ಶಾಕ್ ಗೆ ಒಳಗಾಗಿದೆ.

ಮನೆಯವರು ಈಗ ವೆಂಕಟೇಶ್ ಅವರನ್ನು ಬದುಕಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ನಿಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸಹಾಯ ಮಾಡಲಿಚ್ಛಿಸುವವರು ಹೊದ್ದೆಟ್ಟಿ ವೆಂಕಟೇಶ್ ರವರ ಮಗ ಹರ್ಷಿತ್ H V ಅವರ ಮೊಬೈಲ್ ಸಂಖ್ಯೆ 8197132948 ಸಂಪರ್ಕಿಸಬಹುದು ಅಥವಾ ಅವರ ಫೋನ್ ಪೇಗೆ ಹಣ ಕಳುಹಿಸಬಹುದಾಗಿದೆ.

See also  ನಿಮ್ಮ ತಾಲೂಕಿನಿಂದಲೇ ಬ್ಯುಸಿನೆಸ್ ಆರಂಭಿಸಿ, AI ಕಾರ್ಡ್ ತೆರೆದಿಟ್ಟಿದೆ ಅವಕಾಶಗಳ ಹೆಬ್ಬಾಗಿಲು, ಈಗಲೇ ಕರೆ ಮಾಡಿ ನಿಮ್ಮ ಬ್ಯುಸಿನೆಸ್ ಆರಂಭಿಸಿ
  Ad Widget   Ad Widget   Ad Widget   Ad Widget   Ad Widget   Ad Widget