ಕರಾವಳಿಕೊಡಗುಪುತ್ತೂರುಸುಳ್ಯ

ಸಂಪಾಜೆ- ಕಲ್ಲುಗುಂಡಿ: ಪಯಸ್ವಿನಿ ನದಿ ಹೂಳೆತ್ತುವ ಸಮೀಕ್ಷೆ ಆರಂಭ

344

ನ್ಯೂಸ್ ನಾಟೌಟ್: ಕಳೆದ ವರ್ಷ ಎದುರಾಗಿದ್ದ ಭಾರಿ ಪ್ರವಾಹದಲ್ಲಿ ಕಲ್ಲು ಗುಂಡಿ- ಸಂಪಾಜೆ ಗ್ರಾಮದಲ್ಲಿ ಅಪಾರ ನಷ್ಟ ಸಂಭವಿಸಿತ್ತು. ಭಾರಿ ಪ್ರವಾಹದಿಂದಾಗಿ ಸಂಪಾಜೆಯ ಚೌಕಿ ಭಾಗದಿಂದ ಕಲ್ಲುಗುಂಡಿಯ ತನಕ ಪಯಸ್ವಿನಿ ಯಲ್ಲಿ ಹೂಳು ತುಂಬಿಕೊಂಡಿತ್ತು. ಇದೀಗ ಹೂಳೆತ್ತುವ ನಿಟ್ಟಿನಲ್ಲಿ ಗಣಿ ಇಲಾಖೆಯಿಂದ ನದಿಯಲ್ಲಿ ತುಂಬಿರುವ ಹೂಳಿನ‌ ಸಮೀಕ್ಷೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.

ಈ ಹೂಳು ಎತ್ತಿಸದಿದ್ದರೆ ಈ ಸಲವೂ ಮಳೆಗಾಲದಲ್ಲಿ ಸಂಪಾಜೆ ಗ್ರಾಮಕ್ಕೆ ಅಪಾರ‌ ನಷ್ಟ ಸಂಭವಿಸುವ ಆತಂಕ ಎದುರಾಗಿತ್ತು. ಈ ಬಗ್ಗೆ ನ್ಯೂಸ್ ನಾಟೌಟ್ ಜನಪರ ಧ್ವನಿಯಾಗಿ ಸಮಗ್ರ ವರದಿ ಮಾಡಿತ್ತು. ಈ ಬೆನ್ನಲ್ಲೇ ಒಂದಷ್ಟು ಚುರುಕಿನ ಕಾರ್ಯಾಚರಣೆ ಆ ಭಾಗದಲ್ಲಿ ಆರಂಭವಾಗಿತ್ತು. ಇದೀಗ ಗಣಿ ಇಲಾಖೆಯಿಂದ ಸಮೀಕ್ಷೆ ಆರಂಭವಾಗಿದೆ ಎಂದು ತಿಳಿದು ಬಂದಿದೆ. ಡ್ರೋನ್ ಬಳಸಿ ಪಯಸ್ವಿನಿ ನದಿಯಲ್ಲಿ ತುಂಬಿರುವ ಹೂಳಿನ‌ ಸಮೀಕ್ಷೆ ನಡೆಸಲಾಗುತ್ತಿದೆ.

See also  'ಅಜ್ಜಾವರದ ದಲಿತ ಕಾಲೋನಿಗೆ ಮಾನವೀಯತೆಯಿಂದ ನೀರು ಬಿಡಿ..ಜನಾಡಳಿತ ಇರುವುದೇ ಜನರ ಕಷ್ಟಕ್ಕೆ ಸ್ಪಂದಿಸುವುದಕ್ಕಲ್ಲವೇ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget