ಕರಾವಳಿಸುಳ್ಯ

ಸಂಪಾಜೆ: ಕತ್ತಲಿನಲ್ಲಿ ಬಂದವರು ಪ್ರಜ್ಞೆ ತಪ್ಪಿಸಿ ಗೋವನ್ನು ಹೊತ್ತೊಯ್ದರು..!, ಮನಕಲುಕಿದ ಸಿಸಿಟಿವಿ ದೃಶ್ಯ..! ಈ‌ ಪಾಪಕ್ಕೆ ಯಾರು ಹೊಣೆ..?

179

ನ್ಯೂಸ್ ನಾಟೌಟ್ : ಒಂದು ಕಡೆ ಗೋವನ್ನು ರಕ್ಷಿಸಬೇಕು ಎಂಬ ಕೂಗು ಜೋರಾಗಿದೆ. ಮತ್ತೊಂದು ಕಡೆ ಗೋವನ್ನು ಕದ್ದು ಕಸಾಯಿಖಾನೆಗೆ ರವಾನಿಸುತ್ತಿರುವ ಘಟನೆ ನಿತ್ಯ ಸಂಪಾಜೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುತ್ತಿದ್ದರೂ ಈ‌ ಬಗ್ಗೆ ಯಾರಿಗೂ ಗೊಡವೆಯೇ ಇಲ್ಲ..!

ಸಂಪಾಜೆ ಗ್ರಾಮ‌ ಪಂಚಾಯತ್ ಭಾಗದಲ್ಲಿ ಬೀಡಾಡಿ ದನಗಳಿವೆ. ಭಾರಿ ಸಂಖ್ಯೆಯಲ್ಲಿರುವ ಇವುಗಳು ಆಗಾಗ್ಗೆ ವಾಹನ ಸವಾರರಿಗೆ ಹಗಲು ಹಾಗೂ ರಾತ್ರಿ ಹೊತ್ತಿನಲ್ಲಿ ಒಂದೇ ಸಮನೆ ಕಿರಿಕ್‌ ಮಾಡುತ್ತವೆ. ಎಷ್ಟೋ ಸಲ ಇವುಗಳಿಂದಲೇ ಅಪಘಾತಗಳಾಗಿವೆ.

ಈ ಬಗ್ಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಬಂಧ ಪಟ್ಟ ಹಸುಗಳ ಮಾಲೀಕರ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ.

ಇಂತಹ ಸಮಯದಲ್ಲಿ‌ ಸಂಪಾಜೆಯ ಗಡಿಕಲ್ಲು ಸಮೀಪ ಶುಕ್ರವಾರ (ಜೂ.7) ರಾತ್ರಿ ಮಲಗಿದ್ದ ಹಸುವನ್ನು ಪ್ರಜ್ಞೆ ತಪ್ಪಿಸಿ ಅಪರಿಚಿತರು ತಮ್ಮ ವಾಹನಕ್ಕೆ ತುಂಬಿಸಿಕೊಂಡು ಪರಾರಿಯಾಗಿದ್ದಾರೆ.

ಈ ದೃಶ್ಯಾವಳಿಗಳು ಸಮೀಪದ ಮನೆಯೊಂದರ‌ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಮೊದಲ ಹಸುವನ್ನು ಪ್ರಜ್ಞೆ ತಪ್ಪಿಸಿ ವಾಹನಕ್ಕೆ ತುಂಬಿಸಿ ಎರಡನೇ ಹಸುವನ್ನು ತುಂಬಿಸುವ ಸಂದರ್ಭ ದಲ್ಲಿ ಸ್ಥಳೀಯರಿಗೆ ಗೊತ್ತಾಗಿದೆ. ಈ ವೇಳೆ ಅಪರಿಚಿತರು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.

See also  ಸುಳ್ಯ: ದಿಢೀರ್ ಆರೋಗ್ಯದಲ್ಲಿ ಏರುಪೇರು,ಚಿಕಿತ್ಸೆ ಪಡೆಯುತ್ತಿದ್ದ ಕ್ರೀಡಾಪಟು/ಎಲೆಕ್ಟ್ರೀಷಿಯನ್ ನಿಧನ
  Ad Widget   Ad Widget   Ad Widget   Ad Widget   Ad Widget   Ad Widget   Ad Widget