ಕ್ರೈಂ

ಕಾರ್ -ಬೈಕ್ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ 

ಸಂಪಾಜೆ : ಇಲ್ಲಿನ ಗಡಿಕಲ್ಲು ಎಂಬಲ್ಲಿ ಮಸೀದಿ ಸಮೀಪ ಕಾರ್ ಮತ್ತು ಬೈಕ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ರೋಹಿತ್ ಎಂಬ ವ್ಯಕ್ತಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಬೈಕ್ ಸವಾರನಿಗೆ ಗುದ್ದಿದ್ದಾರೆ ಎನ್ನಲಾಗಿದೆ. ಬೈಕ್ ಸವಾರನ ಕಾಲಿಗೆ, ತಲೆ ಭಾಗಕ್ಕೆ  ಗಂಭೀರ ಪೆಟ್ಟು ಬಿದ್ದಿದೆ.. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.

Related posts

ಕೋಟ್ಯಾಧಿಪತಿಗಳಾಗಲು ವಾಮಾಚಾರಕ್ಕೆ ಸ್ನೇಹಿತನನ್ನೇ ಶಿರಚ್ಛೇದ ಮಾಡಿದ ಕ್ರೂರಿಗಳು..! ವಾಮಾಚಾರಿಗಳು ಸೇರಿ ನಾಲ್ವರು ಅರೆಸ್ಟ್..!

ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ: ಇಬ್ಬರನ್ನು ಬಂಧಿಸಿದ ಸುಳ್ಯ ಪೊಲೀಸರು

ತಾನೇ ದುಡಿಯುತ್ತಿದ್ದ ಕಂಪೆನಿಯಿಂದ ಲ್ಯಾಪ್-ಟಾಪ್ ಕದ್ದವನಿಗಿತ್ತು ವಿಚಿತ್ರ ಕಾರಣ..! 22 ಲಕ್ಷ ಮೌಲ್ಯದ 50 ಲ್ಯಾಪ್-ಟಾಪ್ ಸೀಜ್ ಮಾಡಿದ ಪೊಲೀಸರು..!